ರಾಜಕೀಯ ಅಖಾಡಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ ? ಬಿಜೆಪಿಯತ್ತ ರವಿ ಚನ್ನಣ್ಣನವರ್ ಒಲವು ?

ಬೆಂಗಳೂರು, ಆ. 07: ಇತ್ತೀಚೆಗೆ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರುತ್ತಿರುವ ಬೆನ್ನಲ್ಲಿ ಇದೀಗ ರಾಜ್ಯದ ಖಡಕ್ ಅಧಿಕಾರಿ ಎಂದು ಹೆಸರು ಪಡೆದಿರುವ ರವಿ ಚೆನ್ನಣ್ಣನವರ್ ಹೆಸರು ಕೂಡ ರಾಜಕೀಯದಲ್ಲಿ ವಲಯದಲ್ಲಿ ತಳುಕು ಹಾಕಿಕೊಳ್ಳುತ್ತಿದೆ.

ಇದಕ್ಕೆಲ್ಲ ಮುಖ್ಯ ಕಾರಣ ಎಂಬಂತೆ ಇತ್ತೀಚೆಗೆ ರವಿ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಬಿ.ಎಲ್. ಸಂತೋಷ್ ಜೊತೆ ಇರುವ ಇವರ ಪೋಟೋಗಳು ವೈರಲ್ ಆಗಿದ್ದು ರಾಜಕೀಯ ಸೇರುತ್ತಾರೆ ಎಂಬ ಅನುಮಾನಕ್ಕೆ ಮತಷ್ಟು ಪುಷ್ಟಿ ನೀಡಿದಂತಾಗಿದೆ.

ಇವರ ಈ ಭೇಟಿಯ ಕೆಲವು ದಿನಗಳ ಮುಂಚೆ ಬಿಎಸ್ಪಿ ಪಕ್ಷದ ಉಚ್ಚಾಟಿತ ಸದಸ್ಯ ಕೊಳ್ಳೆಗಾಲ ಕ್ಷೇತ್ರದ ಶಾಸಕ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದೀಗ ರವಿ ಚನ್ನಣ್ಣನವರ್ ಭೇಟಿ ಕೂಡ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.

ಈ ಹಿಂದೆ ಮಾಜಿ ಐಪಿಎಸ್ ಅಧಿಕಾರಿ ಆಣ್ಣಾಮಲೈ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಗೆ ಸೇರಿ ಚುನಾವಣೆಗೂ ಕೂಡ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

Exit mobile version