ಡಿ.ಕೆ ಬ್ರದರ್ಸ್ ಚಿತ್ರಾನ್ನ ಗಿರಾಕಿಗಳು : ಅಶ್ವಥ್ ನಾರಾಯಣ

DK brothers

ಬೆಂಗಳೂರು : ಕಾಂಗ್ರೆಸ್(Congress) ಪಕ್ಷಕ್ಕೆ(Party) ಭವಿಷ್ಯ ಇಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೂ ಅವಕಾಶ ಇಲ್ಲ, ಎಲ್ಲರೂ ಬಿಟ್ಟುಹೋಗುತ್ತಿದ್ದಾರೆ. ಡಿಕೆ ಸಹೋದರರು ಚಿತ್ರಾನ್ನ ಗಿರಾಕಿಗಳು. ಅಣ್ಣ-ತಮ್ಮ ಸೂಟ್ಹೊಲಿಸಿಕೊಂಡು ನಿರಾಸೆಯಾಗಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ(Ashwath Narayan) ವ್ಯಂಗ್ಯವಾಡಿದ್ದಾರೆ.


ಮಾಗಡಿಯ ಚಿಕ್ಕಕಲ್ಯಾ ಗ್ರಾಮದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನಾಶವಾಗಲಿದೆ. ಯಾರು ಸಹ ಆ ಪಕ್ಷದಲ್ಲಿ ಇರುವುದಿಲ್ಲ. ಸದ್ಯ ಸಿದ್ದರಾಮಯ್ಯ(Siddaramaiah) ಒಬ್ಬರೇ ನಾಯಕರಾಗಿದ್ದಾರೆ. ಅದೇ ರೀತಿ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಹುಡುಕ ಬೇಕಾದ ಪರಿಸ್ಥಿತಿಯಿದೆ. ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ ಎಂದರು.
ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಬದುಕುತ್ತಿದ್ದಾರೆ. ಡಿಕೆ ಸಹೋದರರು ಚಿತ್ರಾನ್ನ ಗಿರಾಕಿಗಳು.

ಇಡೀ ಕಾಂಗ್ರೆಸ್ ಪಕ್ಷವೇ ನಿರ್ಣಾಮವಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಅವರ ಮತ್ತು ಅವರ ಮನೆಯವರ ಅಭಿವೃದ್ದಿ ಮಾತ್ರ ಮುಖ್ಯವಾಗಿದೆ. ಇನ್ನು ಸಿದ್ದರಾಮಯ್ಯನವರು ಈ ಹಿಂದೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಘೋಷಣೆ ಮಾಡಿದ್ದರು. ಆದರೆ ಐದು ವರ್ಷಗಳ ಕಾಲ ಅಧಿಕಾರದ ರುಚಿ ನೋಡಿದ ನಂತರ ಈಗ ಮತ್ತೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ತಿರುಗಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಅಧಿಕಾರದ ಆಸೆ ಇದೆ. ಈ ಹಿಂದೆ ಅವರು ಅನೇಕ ಅಕ್ರಮಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ಇನ್ನು ನಾನು ಹಿಂದಿನಿಂದ ಚಾಕು, ಚೂರಿ ಹಾಕುವ ಕೆಲಸ ಮಾಡುವ ವ್ಯಕ್ತಿಯಲ್ಲ. ನಾನು ಎಂದಿಗೂ ಅಧಿಕಾರದ ಹಿಂದೆ ಓಡಿದವನಲ್ಲ. ನನ್ನ ಪಕ್ಷ ನನಗೆ ವಹಿಸಿದ ಕಾರ್ಯವನ್ನು ಮಾಡುತ್ತಾ ಬಂದಿದ್ದೇನೆ. ನನಗೆ ಏನು ಕೊಟ್ಟರು ಕೆಲಸ ಮಾಡುತ್ತೇನೆ. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬ ಆತಂಕ ಅನೇಕ ಕಾಂಗ್ರೆಸ್ ನಾಯಕರಿಗೆ ಕಾಡುತ್ತಿದೆ. ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

Exit mobile version