ಆತ್ಮಹತ್ಯೆಗೆ ಶರಣಾದ ಉಪವಲಯ ಅರಣ್ಯಾಧಿಕಾರಿ

ಬಳ್ಳಾರಿ, ಜ. 05: ಗಣಿನಾಡು ಬಳ್ಳಾರಿಯ ಉಪವಲಯ ಅರಣ್ಯಾಧಿಕಾರಿಯೊಬ್ಬರು ತಮ್ಮ ಬಾಡಿಗೆ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗಂಗಾವತಿಯ ಜಮಾಪುರ ಗ್ರಾಮದ ಬಸವರಾಜ್ ವೀರಾಪುರ(31) ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರಿಗೆ ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಘಟನೆಗೆ ಕಾರಣ ಪತ್ತೆಯಾಗಿಲ್ಲ.

ಈ ಸಂಬಂಧ ಸಂಡೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಬಗ್ಗೆ ಪೊಲೀಸರು ತನಿಖೆಯನ್ನು  ಕೈಗೆತ್ತಿಕೊಂಡಿದ್ದಾರೆ, ಎಂದು ತಿಳಿದುಬಂದಿದೆ.

Exit mobile version