BAN POP: ನಿಷೇಧಿತ ಪಿಓಪಿ ಏಕದಂತನಿಗೆ ಭಾರೀ ಡಿಮ್ಯಾಂಡ್, ಹಬ್ಬದ ಪ್ರಯುಕ್ತ ಮುಂಗಡ ಬುಕಿಂಗ್ !

Bengaluru: ಗೌರಿ ಗಣೇಶ ಹಬ್ಬಕ್ಕೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ ನಿಷೇಧಿತ ಪಿಓಪಿ (banned pop ganesha demand) ಗಣೇಶನಿಗೆ ಡಿಮ್ಯಾಂಡ್ ಶುರುವಾಗಿದ್ದು, ಮುಂಗಡ ಬುಕಿಂಗ್

(Booking) ಕೂಡಾ ಶುರುವಾಗಿದೆ. ಇದರ ನಡುವೆಯೇ ಕರ್ನಾಟಕ (Karnataka) ಮಾತ್ರವಲ್ಲದೆ ಹೊರರಾಜ್ಯವಾದ ಹೈದರಾಬಾದ್‌ (Hyderabad)ಹಾಗೂ ಮತ್ತೆ ಹಲವು ಕಡೆಗಳಿಂದಲೂ

ನಿಷೇಧಿತ ಪಿಓಪಿ ಬಾಡಿಗೆ ಗಣೇಶನ ಮೂರ್ತಿಗಳು (banned pop ganesha demand) ಕರುನಾಡಿಗೆ ಬರುತ್ತಿವೆ.

ಈ ನಿಷೇಧಿತ ಪಿಓಪಿ ಗಣೇಶ ಮೂರ್ತಿಗಳ ಉಪಯೋಗದಿಂದ ಕೆರೆಗಳು ಮಲೀನಗೊಳ್ಳುತ್ತಿರುವುದರಿಂದ ಈ ಪ್ರಕಾರದ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದ್ದು,

ಪಿಓಪಿ ಗಣೇಶ ತಯಾರಕರು ಈಗ ಹೊಸ ದಾರಿ ಕಂಡುಕೊಂಡಿದ್ದಾರೆ. ಗ್ರಾಹಕರು ಅವರಿಗೆ ಇಷ್ಟವಾಗುವ ಗಣೇಶನ ಮೂರ್ತಿಗಳನ್ನು ಬೇಕಾದಷ್ಟು ದಿನ ಬಾಡಿಗೆ ಪಡೆದು ನಂತರ ಮೂರ್ತಿಗಳ

ಮಾಲೀಕರಿಗೆ ವಾಪಸ್‌ ಮಾಡಬಹುದಾಗಿದ್ದು, ಮೂರ್ತಿಗಳ ಎತ್ತರ, ವಿನ್ಯಾಸದ ಮೇಲೆ ಬಾಡಿಗೆಯ ದರ ನಿಗದಿ ಮಾಡಲಾಗುತ್ತದೆ.

ಸಾಮಾನ್ಯವಾಗಿ ದಿನಕ್ಕೆ 2 ಹಾಗೂ 5 ಸಾವಿರ ರೂ.ನಿಂದ ಪ್ರಾರಂಭವಾಗಿ 10 ಸಾವಿರ ರೂ.ವರೆಗೆ ಬಾಡಿಗೆಗೆ ದೊರಕುತ್ತಿತ್ತು. ಕಳೆದ ಎರಡು ವರ್ಷಗಳಿಂದಲೂ ಇಂತಹದೊಂದು ವ್ಯವಸ್ಥೆ ಜಾರಿಗೆ

ಬಂದಿದ್ದರೂ ಈ ಸಲ ಮಾತ್ರ ಬಾಡಿಗೆ ಗಣಪನಿಗೆ ಬೆಂಗಳೂರಿನಲ್ಲಿ (Bengaluru) ಭಾರಿ ಬೇಡಿಕೆ ಬಂದಿದ್ದು, ಮಾರುಕಟ್ಟೆಯಲ್ಲಿ ಪಿಓಪಿ ಮತ್ತು ಫೈಬರ್‌ನಿಂದ (Fiber) ತಯಾರಿಸುವ ದೊಡ್ಡ

ಮೂರ್ತಿಗಳು ಬಾಡಿಗೆಗೆ ಲಭ್ಯವಿದೆ.

ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿ ಜಿ.ಟಿ. ದೇವೇಗೌಡ ನೇಮಕ ; ಲೋಕಸಭಾ ಚುನಾವಣೆ ಹೊಣೆಗಾರಿಕೆ..!

ಇನ್ನು 16 ಅಡಿ ಪಿಓಪಿ ಗಣೇಶ ಮೂರ್ತಿಯ ಬೆಲೆ 70-80 ಸಾವಿರ ರೂ.ಗಳಾದರೆ ಇದೇ ಗಾತ್ರದ ಫೈಬರ್‌ ಗಣೇಶ ಮೂರ್ತಿ 2 ಲಕ್ಷ ಹಾಗೂ ಇನ್ನಷ್ಟು ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಇಷ್ಟು ದುಬಾರಿ ಗಣೇಶ ಮೂರ್ತಿಗಳನ್ನು ಖರೀದಿಸುವುದು ಕಷ್ಟ ಹಾಗಾಗಿ ಇವುಗಳನ್ನು ಮೂರು ಅಥವಾ ಐದು ದಿನಗಳ ಕಾಲ ಗಣೇಶ ಮೂರ್ತಿ ತಯಾರಕರಿಂದ ಗ್ರಾಹಕರು ಬಾಡಿಗೆಗೆ ಪಡೆಯುತ್ತಾರೆ.

ಸಾರ್ವಜನಿಕ ಗಣೇಶೋತ್ಸವಗಳಲ್ಲಿಯೂ ಇಂತಹ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಷರತ್ತುಗಳು:
೧. ಮೂರ್ತಿಯ ಅಸಲಿ ದರವನ್ನು ಬಾಡಿಗೆ ಪಡೆಯುವವರು ಠೇವಣಿ ಇಡಬೇಕು.
೨. ಎಷ್ಟು ದಿನದ ಬಾಡಿಗೆ ಬೇಕೋ ಅಷ್ಟು ದಿನಗಳ ಬಾಡಿಗೆ ಹಣವನ್ನು ಮುಂಗಡವಾಗಿ ಕಟ್ಟಿ ಮೂರ್ತಿಗಳನ್ನು ಕೊಂಡೊಯ್ಯಬೇಕು.
೩. ಗ್ರಾಹಕರೇ ಸಂಚಾರ ವೆಚ್ಚವನ್ನು ಕೊಡಬೇಕು.

ಬೆಂಗಳೂರಿನ ಆರ್‌.ವಿ. (R V) ರಸ್ತೆಯ ಗಣೇಶ ಮೂರ್ತಿ ಮಾರಾಟಗಾರ ಎಂ. ಶ್ರೀನಿವಾಸ್‌ (M Srinivas) ಅವರು ಬೆಂಗಳೂರಿನಾದ್ಯಂತ ಸಾವಿರಾರು ಪಿಓಪಿ ಮೂರ್ತಿಗಳಿದ್ದು, ಇವುಗಳನ್ನು

ಪರಿಸರಕ್ಕೆ ಹಾನಿ ಉಂಟಾಗದಂತೆ ನೀರಿನಲ್ಲಿ ವಿಸರ್ಜನೆಗೆ ಅವಕಾಶ ನೀಡದಂತೆ ಬಾಡಿಗೆಗೆ ಕೊಟ್ಟು ಮತ್ತೆ ಪುನರ್‌ ಬಳಕೆಯ ವಿಧಾನವನ್ನು ಅನುಸರಿಸುತ್ತೇವೆ ಎಂದು ಹೇಳಿದರು.

ಪಿಓಪಿ (POP) ಗಣೇಶನ ಮೂರ್ತಿಯೊಂದಿಗೆ ಮಣ್ಣಿನ ಮೂರ್ತಿಯನ್ನು ಕೂರಿಸಿ ಪೂಜಿಸುತ್ತಾರೆ. ಮೆರವಣಿಗೆಯವರೆಗೆ ಎರಡೂ ಒಟ್ಟಿಗಿರುತ್ತವೆ. ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ.

ಪಿಓಪಿ ಗಣೇಶನನ್ನು ನಮಗೆ ವಾಪಸ್‌ ಕೊಡುತ್ತಾರೆ. ನಾವು ಮತ್ತೆ ಮುಂದಿನ ವರ್ಷ ಆ ಮೂರ್ತಿಗಳನ್ನು ಬಾಡಿಗೆಗೆ ನೀಡುತ್ತೇವೆ. ಇದರಿಂದ ಪರಿಸರಕ್ಕೂಹಾನಿಯಾಗುವುದಿಲ್ಲ.

ಭವ್ಯಶ್ರೀ ಆರ್.ಜೆ

Exit mobile version