ಬೊಮ್ಮಾಯಿ ದೇವಾಲಯಗಳನ್ನ ಧ್ವಂಸ ಮಾಡಲು ಅಧಿಕಾರಿಗಳನ್ನು ಬಿಟ್ಟದ್ದಾರೆ – ಸಿದ್ದಲಿಂಗ ಸ್ವಾಮೀಜಿ

ಬೀದರ್ ಸೆ 21 : ಬೊಮ್ಮಾಯಿ ಅವರು ಸಂಘ ಪರಿವಾರದಿಂದ ಬಂದಿಲ್ಲ ಅವರು,ಕಮ್ಯುನಿಸ್ಟ್ ಪಕ್ಷದಿಂದ ಬಂದವರು ಹಾಗಾಗಿ ಅವರು ರಾಜ್ಯದಲ್ಲಿ ಅಭಿವೃದ್ದಿ ಮಾಡುವುದನ್ನು ಬಿಟ್ಟು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲು ಅಧಿಕಾರಿಗಳನ್ನು ಬಿಟ್ಟಿದ್ದಾರೆ. ಎಂದು ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

 

ಈ ಬಗ್ಗೆ ಮಾತನಾಡಿದ ಅವರು ಹಿಂದುತ್ವದ ಹೆಸರಿನಲ್ಲಿ ಅಧಿಕಾರಿಕ್ಕೆ ಬಂದ ಬಿಜೆಪಿಯೇ ಹಿಂದೂ‌ ದೇವಾಲಯಗಳನ್ನು ಕೆಡುವುತ್ತಿದ್ದಾರೆ.ಬೊಮ್ಮಾಯಿ ಕ್ಷೇತ್ರದಲ್ಲಿಯೇ ಅಕ್ರಮ ಮಸೀದಿಗಳಿವೆ ತಾಕತ್ತಿದ್ದರೆ ಅವುಗಳನ್ನ ನೆಲಸಮ ಮಾಡಿ. ಅವರ ಕ್ಷೇತ್ರದ ಬಂಕಾಪುರದಲ್ಲಿ ಅಕ್ರಮ‌ ಮಸೀದಿಗಳಿವೆ ಅವುಗಳನ್ನ ಒಡೆದರೆ ಮತ ಹಾಕೊದಿಲ್ಲ. ಮುಸ್ಲಿಂಮರು ಮತ ಹಾಕೊದಿಲ್ಲ ಅಂತಾ ಮಸೀದಿಗಳನ್ನು ಅವರು ಒಡೆಯುತ್ತಿಲ್ಲ. ದೇವಸ್ಥಾನ ಒಡೆಸುವ ಮುಖ್ಯಮಂತ್ರಿ ಬೊಮ್ಮಾಯಿ ನಡೆ ರಾಜ್ಯದ ಹಿಂದೂಗಳ ಮನಸಿಗೆ ನೋವು ತಂದಿದೆ. ಒಂದು ಧರ್ಮಕ್ಕೆ ಸೀಮಿತವಾಗಿ ದೇವಾಲಯ ಒಡೆಯುವಂತೆ ಸುಪ್ರೀಂ ಎಲ್ಲಿಯೂ ಹೇಳಿಲ್ಲ. ಬೊಮ್ಮಾಯಿ ಅವರು ಎಷ್ಟು ಅಕ್ರಮ ಮಸೀದಿ ಚರ್ಚ್‌ ಒಡೆದಿದ್ದೀರಿ ಎಂಬ ಬಗ್ಗೆ ಉತ್ತರ ನೀಡಬೇಕೆಂದು ಎಂದು ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

Exit mobile version