ರಾಜ್ಯದ ರೈತ ಮಕ್ಕಳಿಗೆ ಶಿಷ್ಯವೇತನ – ಸಿಎಂ ಬೊಮ್ಮಾಯಿ

ಹಾವೇರಿ ಸೆ 1: ರಾಜ್ಯದ ರೈತರ ಮಕ್ಕಳು ಬೇರೆ ಮಕ್ಕಳಂತೆ ಎಲ್ಲಾ ರಂಗದಲ್ಲೂ ಮುಂದೆ ಬರಬೇಕು ಎಂಬ ಉದ್ದೇಶದಿಂದ ಶಿಷ್ಯ ವೇತನ ನೀಡಲು ರಾಜ್ಯ ಸರ್ಕಾರ ನೂತನ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಅವರು ಶಿಗ್ಗಾಂವಿಯಲ್ಲಿ 34.47 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾದ ಏತನೀರಾವರಿ ಯೋಜನೆಯಡಿ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ  ಅವರು ರೈತರ  ಆದಾಯವನ್ನು ಎರಡು ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ಇಡೀ ದೇಶದಲ್ಲಿ‌ಯೇ ಇಂತಹ ಯೋಜನೆಗಳ  ಮೂಲ ಕಾರಣ ಕರ್ನಾಟಕದ ರೈತರಾಗಿದ್ದು, ರೈತರ ಅಭಿವೃದ್ಧಿಗೋಸ್ಕರ ಅವರಿಗೆ ಬೇರೆ ಬೇರೆ ರೀತಿಯ ತರಬೇತಿ‌ಗಳನ್ನು ನೀಡಿ ಅವರ ಅಭ್ಯುದಯಕ್ಕಾಗಿ ಶ್ರಮಿಸಲಾಗುತ್ತದೆ. ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Exit mobile version