ವ್ಯವಹಾರದಲ್ಲಿ ಲೋಪ ಎಂಬ ಕಾರಣಕ್ಕೆ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!

father

ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಜನ್ಮಕೊಟ್ಟ ತಂದೆ ಮಗನಿಗೆ ನಡುರಸ್ತೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಧಾರುಳ ಘಟನೆ ನಡೆದಿದೆ. ಹೌದು, ವ್ಯವಹಾರ ನಡೆಸಿಕೊಂಡು ಹೋಗುವಾಗ ಜಾಗೃತರಾಗಿರಬೇಕು ಎಂದು ಹೇಳಿದ ತಂದೆಯೂ, ಮಗ ಅರ್ಪಿತ್ ತನ್ನ ಕೆಲಸದಲ್ಲಿ 12 ಸಾವಿರ ರೂ. ಕಳೆದುಕೊಂಡಿದ್ದಾನೆ.

ಮಗ ವ್ಯವಹಾರದಲ್ಲಿ 12 ಸಾವಿರ ರೂ. ಕಳೆದುಕೊಂಡಿದ್ದಾನೆ ಎಂಬುದನ್ನು ತಿಳಿದ ತಂದೆ ಸುರೇಂದ್ರ ಯಾಕೆ? ಏನು ಎಂಬುದನ್ನು ಕುಳಿತು ಮಾತನಾಡಿ ವಿಚಾರಿಸುವುದನ್ನು ಬಿಟ್ಟು, ಕಳೆದುಕೊಂಡ ಎಂಬ ಒಂದು ಕಾರಣಕ್ಕೆ ಸ್ವಂತ ಮಗ ಎಂದು ನೋಡದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿದ ಕೂಡಲೇ ಅರ್ಪಿತ್ ಕಿರುಚಾಡಲು ಪ್ರಾರಂಭಿಸಿದ್ದಾನೆ, ನೆರವಿಗೆ ಸ್ಥಳೀಯರು ತಡವಾಗಿ ಬಂದರೂ ಶೀಘ್ರವೇ ಅರ್ಪಿತ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅರ್ಪಿತ್ ದೇಹ ಅರ್ಧ ಸುಟ್ಟುಹೋದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ ಎನ್ನಲಾಗಿದೆ. ಅರ್ಪಿತ್ ಅವರಿಗೆ ತಂದೆ ಸುರೇಂದ್ರ ಬೆಂಕಿ ಹಚ್ಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಮಾನವೀಯ ಘಟನೆ ಬೆಂಗಳೂರಿನ ಆಜಾದ್ ನಗರದಲ್ಲಿ ನಡೆದಿದೆ!

Exit mobile version