ದೇಶದ ಅತ್ಯುನ್ನತ ಪ್ರಶಸ್ತಿ ‘ಭಾರತ ರತ್ನ’ ಪಡೆದ ಮೊಟ್ಟ ಮೊದಲ ಮಹಿಳೆ ಇಂದಿರಾ ಗಾಂಧಿ ; ಈ ಮಾಹಿತಿ ಓದಿ

India : ಭಾರತ ರತ್ನ(Bharat Ratna) ಎನ್ನುವ ಪ್ರಶಸ್ತಿಯು ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುನ್ನತ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ.

ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು, ಆರಂಭದ ಸಮಯದಲ್ಲಿ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ.

ಮಹಾತ್ಮ ಗಾಂಧೀಜಿಯವರಿಗೆ(Mahatma Gandhi) ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಆಗಿತ್ತು.

ಆದರೆ, 1966ರ ಇಸವಿಯ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ನೀಡಲಾಯಿತು.

ಇದುವರೆಗೂ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಇನ್ನು, ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲ, ಆದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ.

ಇದನ್ನೂ ಓದಿ : https://vijayatimes.com/dissolving-fat/

ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರು ವ್ಯಕ್ತಿಗಳೆಂದರೆ, 1990 ರಲ್ಲಿ ನೆಲ್ಸನ್ ಮಂಡೇಲಾ(Nelsana Mandela) ಮತ್ತು 1987 ರಲ್ಲಿ ಖಾನ್ ಅಬ್ದುಲ್ ಗಫಾರ್ ಖಾನ್.

ಭಾರತ ರತ್ನ ಪ್ರಶಸ್ತಿ ಪದಕಕ್ಕೆ, ಆರಂಭದಲ್ಲಿ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ “ಭಾರತ ರತ್ನ”,

ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು “ಸತ್ಯಮೇವ ಜಯತೇ” ಎಂದು ಬರೆಯಬೇಕೆಂದಿದ್ದಿತು.

ಆದರೆ ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಅದರ ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿರುವ ವಿನ್ಯಾಸಕ್ಕೆ ಬದಲಾಯಿಸಲಾಯಿತು.

ಇನ್ನು, ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ ಇಂದಿರಾ ಗಾಂಧಿ.

ಹೌದು, ಇಂದಿರಾ ಗಾಂಧಿ(Indira Gandhi) ಭಾರತ ದೇಶ ಮುನ್ನಡೆಸಿದ ವರ್ಚಸ್ವೀ ರಾಜಕಾರಣಿ, ವಿವಾದಾತ್ಮಕ ನಾಯಕರಲ್ಲೊಬ್ಬರು.

ಅವರು 1866-77 ಮತ್ತು 1980-84 ರವರಗೆ ತಮ್ಮ ಸಾವಿನವರೆಗೂ ಈ ದೇಶದ ಪ್ರಧಾನ ಮಂತ್ರಿಯಾಗಿದ್ದರು.

https://youtu.be/AOZCDXADxBQ ಒಂದೇ ಕುಟುಂಬದಿಂದ 7 ಯುವ ಕೃಷಿಕರು

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುತ್ರಿಯಾಗಿದ್ದ ಇಂದಿರಾ. ಅವರ ತಾಯಿ ಕಮಲಾ ನೆಹರು ಅನಾರೋಗ್ಯದಿಂದ ಇಂದಿರಾ ಚಿಕ್ಕವರಿದ್ದಾಗಲೇ ತೀರಿಕೊಂಡರು.

ಇನ್ನು ಸ್ವಾತಂತ್ರ್ಯ ಚಳುವಳಿಗಳಲ್ಲಿ ನೆಹರು ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಬಹುಕಾಲ ಜೈಲಿನಲ್ಲೇ ಕಳೆದರು.

ಈ ಕಾರಣಕ್ಕಾಗಿ ಇಂದಿರಾ ಅವರು ವಿದ್ಯಾಭ್ಯಾಸವನ್ನು ಬಹುತೇಕ ಹಾಸ್ಟೆಲ್, ಬೋರ್ಡಿಂಗ್ ಶಾಲೆಗಳಲ್ಲೇ ಕಳೆದರು. ಇಂದಿರಾ ಗಾಂಧಿಯವರು 1942ರಲ್ಲಿ ಫಿರೋಜ್ ಗಾಂಧಿ ಅವರನ್ನು ವಿವಾಹವಾದರು.

ನಂತರ ಅವರ ತಂದೆ ನೆಹರು ಪ್ರಧಾನಿ ಆಗುತ್ತಿದ್ದಂತೆಯೇ ಅವರಿಗೆ ಸಹಾಯಕರಾಗಿ,

ಅವರ ನಂತರದಲ್ಲಿ ಪ್ರಧಾನಿ ಆಗಿದ್ದ ಲಾಲ್ ಬಹಾದ್ದೂರ ಶಾಸ್ತ್ರೀ ಅವರ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸಿದರು.

ಇದೇ ವೇಳೆ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಇಂದಿರಾ ತಮ್ಮ ಭವಿಷ್ಯತ್ತಿಗೆ ಗಟ್ಟಿಯಾದ ಅಡಿಪಾಯ ನಿರ್ಮಿಸಿಕೊಂಡರು.

ಇವರು 1980 ರಲ್ಲಿ ಮತ್ತೆ ಪ್ರಧಾನಿಯಾದ ಸಂದರ್ಭದಲ್ಲಿ, ಹಲವಾರು ಆತುರದ ನಿರ್ಧಾರಗಳನ್ನು ತೆಗೆದುಕೊಂಡ ಕಾರಣ ಅವರ ಸಾವನ್ನು ಅವರೇ ಆಹ್ವಾನಿಸಿದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : https://vijayatimes.com/sathish-jarkiholi-about-hindu/

1984 ರಲ್ಲಿ ಇಂದಿರಾ ಗಾಂಧಿ ಸಾವನ್ನಪ್ಪುತ್ತಾರೆ. ಏನೇ ಆದರೂ, ತಮ್ಮ ಹಲವಾರು ಸಾಧನೆಗಳ ಫಲವಾಗಿ,

ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊಟ್ಟ ಮೊದಲು ಮಹಿಳೆ ಎಂಬ ಖ್ಯಾತಿಗೆ ಇಂದಿರಾ ಗಾಂಧಿ ಅವರು ಪಾತ್ರರಾಗಿದ್ದಾರೆ.

Exit mobile version