ಭವಾನಿ ರೇವಣ್ಣ ಶಾಸಕಿಯಾಗುವುದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ : ಎಚ್.ಡಿ ರೇವಣ್ಣ!

BHAVANI

ಭವಾನಿ ರೇವಣ್ಣ(Bhavani Revanna) ಶಾಸಕಿಯಾಗೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಐದು ವರ್ಷ ಆಗುತ್ತೊ.. ಹತ್ತು ವರ್ಷ ಆಗುತ್ತೊ ಒಂದು ದಿನ ಭವಾನಿ ರೇವಣ್ಣ ಶಾಸಕಿಯಾಗುತ್ತಾರೆ.

ನಮ್ಮ ಪಕ್ಷ ಅವರಿಗೆ ಹೊಳೆನರಸೀಪುರದಲ್ಲಿ ಟಿಕೆಟ್ ಕೊಟ್ಟರೆ ನಾನೇ ಮುಂದೆ ನಿಂತು ಕೆಲಸ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ(JDS MLA) ಎಚ್.ಡಿ ರೇವಣ್ಣ(HD Revanna) ಹೇಳಿದರು. ಇನ್ನು ಹಾಸನದಲ್ಲಿ ಜೆಡಿಎಸ್- ಬಿಜೆಪಿ ನಾಯಕರ ಮದ್ಯೆ ಟಾಕ್‍ವಾರ್ ಜೋರಾಗಿದೆ. ಬಿಜೆಪಿ ಶಾಸಕ ಪ್ರೀತಂಗೌಡ ದೇವೇಗೌಡರ ಕುಟುಂಬ ರಾಜಕೀಯವನ್ನು ವ್ಯಂಗ್ಯವಾಡಿ ಸರಣಿ ಭಾಷಣಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಹಾಸನದಲ್ಲಿ ನಡೆದ ಎನ್. ಮಹೇಶ್ ಅಭಿಮಾನಿಗಳು ಮತ್ತು ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಒಬ್ಬ ದಲಿತ ಸಮುದಾಯದ ವ್ಯಕ್ತಿ ದೇವೇಗೌಡರ ಮನೆಯೊಳಗೆ ಹೋಗಿಲ್ಲ.

ಹಾಗೇ ಹೋದರೆ ಅವರೇ ಮನೆಯಿಂದ ಹೊರಕ್ಕೆ ಹೊರಟ್ಟಿದ್ದಾರೆ. ದಲಿತ ಸಮುದಾಯದವರನ್ನು ಕಂಡರೆ ಮತ್ತೆ ಮನೆಯೊಳಗೆ ಹೋಗಿ ಸ್ನಾನ ಮಾಡುವ ಸಂಸ್ಕೃತಿ ಅವರ ಕುಟುಂಬದ್ದು. ಹಾಸನ ಜಿಲ್ಲೆಯಲ್ಲಿ ದಲಿತ ಸಮುದಾಯವನ್ನು ಅತ್ಯಂತ ಕೀಳಾಗಿ ನೋಡುವ ಪಕ್ಷವೆಂದರೆ ಅದು ಜಾತ್ಯಾತೀತ ಜನತಾದಳದವರು. ಇನ್ನು ಹಾಸನ ವಿಧಾನಸಭಾ ಕ್ಷೇತ್ರದಿಂದ ನನ್ನ ವಿರುದ್ದ ಸ್ಪರ್ಧಿಸುವಂತೆ ನಾನೇ ರೇವಣ್ಣ ಮತ್ತು ಭವಾನಿ ಅಕ್ಕ ಅವರನ್ನು ಆಹ್ವಾನಿಸುತ್ತಿದ್ದೇನೆ. ನಾನು ಈಗಾಗಲೇ ಫೀಲ್ಡ್‍ನಲ್ಲಿ ಇದ್ದೇನೆ. ರೆಡಿಯಾಗಿ ಅವರ ಫೀಲ್ಡ್‍ಗೆ ಬರಬೇಕಿದೆ ಎಂದು ಪಂಥಾಹ್ವಾನ ನೀಡಿದರು.

ಬಿಜೆಪಿ ಶಾಸಕ ಪ್ರೀತಂಗೌಡ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಎಚ್.ಡಿ ರೇವಣ್ಣ, ಮೀಸಲಾತಿ ಇಲ್ಲದಿದ್ದ ಕಾಲದಲ್ಲಿ ಹಾಸನದಲ್ಲಿ ದಲಿತರಿಗೆ ಅಧಿಕಾರ ನೀಡಿದ್ದು ನಮ್ಮ ಪಕ್ಷ. ನಮ್ಮ ಮನೆಗೆ ಎಷ್ಟು ಜನ ದಲಿತರನ್ನು ಕರೆದುಕೊಂಡು ಬರುತ್ತಾರೊ ಬರಲಿ, ಎಲ್ಲರಿಗೂ ಊಟ ಹಾಕುತ್ತೇನೆ. ನಮ್ಮ ಕುಟುಂಬದ ಬಗ್ಗೆ ಮಾತನಾಡದಿದ್ದರೆ ಈತನ ಹೊಟ್ಟೆಪಾಡು ನಡೆಯಲ್ಲ. ಈತನನ್ನು ಕೇಳಿ ನಾವು ಹಾಸನದಲ್ಲಿ ಅಭ್ಯರ್ಥಿ ಹಾಕಬೇಕಾ ಎಂದು ಆಕ್ರೋಶ ಹೊರಹಾಕಿದರು.

Exit mobile version