Bengaluru: ಬೆಂಗಳೂರಿ (Bengaluru) ನಲ್ಲಿರುವ ಸುಮಾರು 500 ಕೋಟಿ ರೂಪಾಯಿ ಬೆಲೆಬಾಳುವ ಪಶುಸಂಗೋಪನೆ ಇಲಾಖೆಗೆ ಸೇರಿರುವ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ರಾಜ್ಯ ಸರ್ಕಾರ ನೀಡಿದ್ದು, ಸರ್ಕಾರದ ಈ ನಿರ್ಣಯದ ವಿರುದ್ದ ಇದೀಗ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರದ ನಡೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಕುರಿತು ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್ (R Ashok), ಬೆಂಗಳೂರಿನ ಛಲವಾದಿ ಪಾಳ್ಯದ 2 ಎಕರೆ ಭೂಮಿ ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾವಣೆ ಪ್ರಕರಣವು ಖಂಡನೀಯವಾದದು. ಅಲ್ಪಸಂಖ್ಯಾತರ ಓಲೈಕೆಯನ್ನು ಸಿದ್ದರಾಮಯ್ಯನವರ (Siddaramaiah) ಸರ್ಕಾರ ಮುಂದುವರಿಸಿದೆ ಎಂದು ಟೀಕಿಸಿದ್ದಾರೆ.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ (Sunil Kumar), ಪಾಕಿಸ್ತಾನ್ ಜಿಂದಾಬಾದ್ ಎಂದವರ ನಡುಮರಿಯುವ ತಾಕತ್ ಇಲ್ಲದ ಈ ಸರ್ಕಾರಕ್ಕೆ ಇಷ್ಟು ಬಹಿರಂಗವಾಗಿ ಮುಸ್ಲಿಂ ಓಲೈಕೆ ಮಾಡಲು ಲಜ್ಜೆ ಕಾಡುವುದಿಲ್ಲವೇ ? ಗೋಹತ್ಯೆ ನಿಷೇಧ ಕಾಯಿದೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿಕೆ ನೀಡಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದ ಪಶು ಸಂಗೋಪನಾ ಸಚಿವರು, ಪಶುಚಿಕಿತ್ಸಾಲಯದ ಜಾಗವನ್ನು ಮುಸಲ್ಮಾನರ ಶ್ರೇಯೋಭಿವೃದ್ಧಿಗೆ ದಾನ ಮಾಡಿದ್ದಾರೆ. ಜಾಗ ಕೇಳಿದ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ (Jameer Ahmed Khan) ಗೂ ಎಂದು ಟೀಕಿಸಿದ್ದಾರೆ.
ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳ (Guarantee Scheme) ಜಾರಿಗಾಗಿ ರಾಜ್ಯವನ್ನು ಸಾಲದ ಮಡುವಿಗೆ ದೂಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಅನುಷ್ಠಾನ ಸಮಿತಿಗೆ ಅಧ್ಯಕ್ಷರನ್ನು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನದೊಂದಿಗೆ ನೇಮಕಗೊಳಿಸಿದೆ. ಅಂಬಲಿ ಕುಡಿಯುವವ ಮೀಸೆ ಒರೆಸುವುದಕ್ಕೆ ಜನರ ನೇಮಕ ಮಾಡಿಕೊಂಡಂತಾಯ್ತು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಗಮ- ಮಂಡಳಿ ಅಧ್ಯಕ್ಷರನ್ನು ಹೊರತುಪಡಿಸಿ ಒಟ್ಟು 21 ಜನರಿಗೆ ಈಗಾಗಲೇ ಸಂಪುಟ ದರ್ಜೆ ಸ್ಥಾನಮಾನದ ಭಾಗ್ಯ ನೀಡಿದೆ.
ಬರದಿಂದ ಕಂಗೆಟ್ಟಿರುವ ರೈತರಿಗೆ ಪರಿಹಾರ ನೀಡಲು ಮೀನಮೇಷ ಎಣಿಸುವ ಇವರು ತಮ್ಮ ಬಾಲ ಬಡುಕರಿಗೆ ವೆಚ್ಚ ಮಾಡುತ್ತಿರುವ ಸಾರ್ವಜನಿಕರ ಹಣದ ಬಗ್ಗೆ ಅರಿವಿದೆಯೇ ? ನನ್ನ ತೆರಿಗೆ ನನ್ನ ಹಕ್ಕು ಎಂದು ಭಾಷಣ ಬಿಗಿಯುವವರಿಗೆ ಇದು ದುಂದು ವೆಚ್ಚವೆಂಬ ಅರಿವಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.