- ಬಂದ್ ಮಾಡಿದರೆ ಕೋಟಿಗಟ್ಟಲೆ ನಷ್ಟ ಅಗುತ್ತಾ ?
- ಹಾಗಿದ್ರೆ ಬಿಎಂಟಿಸಿಯ ಒಂದು ದಿನದ ಆದಾಯ ಎಷ್ಟು ?
- ಒಂದು ದಿನಕ್ಕೆ ಕೋಟಿಗಟ್ಟಲೆ ಆದಾಯ ಬರುವುದಾದರೆ ನಷ್ಟ ಹೇಗಾಗುತ್ತದೆ ?
ಬೆಂಗಳೂರು ಅ 21 : ದಿನನಿತ್ಯ ಲಕ್ಷಾಂತರ ಮಂದಿ ಬಿಎಂಟಿಸಿಯನ್ನೇ ನೆಚ್ಚಿಕೊಂಡು ಒಡಾಟ ನಡೆಸುತ್ತಿದ್ದರೂ ಕೂಡ ಇತ್ತ ಬಿಎಂಟಿಸಿ ನಷ್ಷದಲ್ಲಿದೆ ಎಂದು ರಾಜ್ಯ ಸರ್ಕಾರ ಶಾಂತಿನಗರದ ಬಿಎಂಟಿಸಿ ಕಟ್ಟಡವನ್ನೇ ಅಡವಿಡುವತ್ತ ಹೆಜ್ಜೆ ಹಾಕಿದೆ.
ಸಾರಿಗೆ ಸಿಬ್ಬಂದಿಗಳ ಮುಷ್ಕರದ ಬಿಸಿ ಹಾಗು ಕೋವಿಡ್ ಹೊಡೆತದಿಂದಾಗಿ ಸಂಕಷ್ಟ ಎದುರಾಗಿದೆ. ದಿನೇ ದಿನೇ ಅಕ್ಷರಶಃ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಲುಗುತ್ತಿದ್ದು, ಕೋಟ್ಯಂತರ ರೂ. ಸಾಲದಲ್ಲಿ ಸಿಲುಕಿ ಒದ್ದಾಡುತ್ತಿದೆ. ನಷ್ಟದ ಸುಳಿಯಲ್ಲಿ ಸಿಲುಕಿರುವ ಬಿಎಂಟಿಸಿ 230 ಕೋಟಿ ರೂ. ಸಾಲಕ್ಕೆ ಶಾಂತಿನಗರ ಟಿಟಿಎಂಸಿ ಕಟ್ಟಡವನ್ನು ಬ್ಯಾಂಕ್ನಲ್ಲಿ ಅಡಮಾನಕ್ಕೆ ಇಟ್ಟಿದೆ. ಇದನ್ನ ಖುದ್ದು ಬಿಎಂಟಿಸಿ ಅಧಿಕಾರಿಗಳೇ ಮಾಹಿತಿ ಹಕ್ಕು ಅಡಿಯಲ್ಲಿ ಉತ್ತರ ಕೊಟ್ಟಿದ್ದಾರೆ.

ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲೇ ಅತಿ ಹೆಚ್ಚು ಸಾಲ ಪಡೆದಿದ್ದು, 2019-20- ರಲ್ಲಿ 160 ಕೋಟಿ ಸಾಲ, 2020-21 ರಲ್ಲಿ 230 ಕೋಟಿ ಸಾಲ ಹಾಗು 2019-20-2020-21 ಅವಧಿಯ ಎರಡು ವರ್ಷದಲ್ಲಿ 407.05 ಕೋಟಿ ರೂ. ಸಾಲ ಮಾಡಿದೆ. ಬಿಎಂಟಿಸಿ ಪ್ರಸ್ತುತ 407.05 ಕೋಟಿಗೆ 57.57 ಕೋಟಿ ರೂ. ಬಡ್ಡಿ ಪಾವತಿಸುತ್ತಿದೆ.
ಬಿಎಂಟಿಸಿ ಇಂತಹ ಪರಿಸ್ಥಿತಿಗೆ ನಿಜವಾಗಿ ಯಾರು ಕಾರಣ?. ಹಿಂದಿನ ಸಾರಿಗೆ ಸಚಿವರಾ? ಅಥವಾ ಬಿಎಂಟಿಸಿ ಅಧಿಕಾರಿಗಳಾ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಸದ್ಯ ಮುಳುಗುವ ಹಡಗಿನಂತಿರುವ ಬಿಎಂಟಿಸಿಯನ್ನ ಕಾಪಾಡುವ ಹೊಣೆ ಸಚಿವ ಶ್ರೀರಾಮುಲು ಅವರ ಹೆಗಲ ಮೇಲಿದೆ.