ಬಂದ್ ಗೆ ಯಾರೂ ಸಹಕರಿಸಬೇಡಿ: ಮುಖ್ಯಮಂತ್ರಿ ಬಿಎಸ್‌ವೈ ಮನವಿ

ಬೆಂಗಳೂರು, ಡಿ. 04: ಕನ್ನಡಪರ ಸಂಘನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಯಾರು ಸಹಕರಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬೆಂಗಳೂರಿನ ಬಸಶಂಕರಿಯಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಿಗರಿಗೂ ಅನ್ಯಾಯ ಮಾಡದೆ ಎಲ್ಲಾ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಯಾರೂ ಕೂಡ ಬಂದ್ ಮಾಡಿಸಬೇಡಿ ಎಂದು ರಾಜ್ಯ ಬಂದ್ ಗೆ ಕರೆ ಕರೆ ನೀಡಿರುವ ಸಂಘಟನೆಗಳನ್ನು ಮನವಿ ಮಾಡಿದರು.

ಕೊರೊನಾ ಮಹಾಮಾರಿಯ ಎರಡನೇ ಅಲೆ ಇರುವ ಕಾರಣ ನೈಟ್ ಕರ್ಫ್ಯೂ ಜಾರಿಗೊಳಿಸುವ ಯಾವ ಉದ್ದೇಶವು ಸರ್ಕಾರಕ್ಕಿಲ್ಲ ಎಂದು ಇದೇ ವೇಳೆ ಯಡಿಯೂರಪ್ಪ ಸ್ಪಷ್ಟಪಡಿಸಿದರು.

Exit mobile version