Tumkur: ತುಮಕೂರು (Tumkur) ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆಯ ಬಳಿಕ (bus problem for student) ಪ್ರಯಾಣಿಕರ ಸಂಖ್ಯೆ ಶೇ 30 ರಷ್ಟು ಹೆಚ್ಚಳವಾಗಿದ್ದು,
ಬಸ್ಗಳ ಕೊರತೆ ಉಂಟಾಗಿದೆ. ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ತೆರಳಲು ಬಸ್ ಇಲ್ಲದೆ ಪರದಾಡುವಂತಹ ಸ್ಥಿತಿ ಬಂದೊದಗಿದೆ. ಇನ್ನು ಕೆಲವು ಕಡೆ ಬಸ್ನಲ್ಲಿ ನೂಕು ನುಗ್ಗಲಲ್ಲೇ ಜೋತಾಡಿಕೊಂಡು
ಹೋಗುವಂತಹ ಪರಿಸ್ಥಿತಿ ಬಂದಿದೆ.
ಕೆಎಸ್ಆರ್ಟಿಸಿ (KSRTC) ಬಸ್ ಪ್ರಯಾಣಿಕರ ಸಂಖ್ಯೆ ಶೇ.25ರಿಂದ 30ರಷ್ಟು ಹೆಚ್ಚಾಗಿದ್ದು, ಸಂಸ್ಥೆಯು ಹೆಚ್ಚಿನ ಬಸ್ಗಳನ್ನು ಸೇವೆಗೆ ಬಿಡುವಲ್ಲಿ ವಿಫಲವಾಗಿರುವ ಕಾರಣ ಜಿಲ್ಲೆಯಾದ್ಯಂತ ಹಲವಾರು
ಭಾಗಗಳಲ್ಲಿ ಪ್ರತಿನಿತ್ಯ ಓಡಾಡುವ ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿದ ನಂತರ
ಪ್ರಯಾಣಿಕರ ಸಂಖ್ಯೆಯಲ್ಲಿ (bus problem for student) ಏರಿಕೆಯಾಗಿದೆ.
ಇನ್ನು ಗ್ರಾಮೀಣ ಪ್ರದೇಶದ ಪ್ರಯಾಣಿಕರಿಗೆ ಇದರಿಂದ ಬಹಳ ತೊಂದರೆಗೊಳಗಾಗಿದ್ದು, ವಿದ್ಯಾರ್ಥಿಗಳ ಪರಿಸ್ಥಿತಿ ಹೇಳತೀರದಾಗಿದೆ. ಬಸ್ ಕೊರತೆಯಿರುವ ಕಾರಣ ನಗರ, ತಾಲ್ಲೂಕು ಪ್ರದೇಶದ
ಸುತ್ತಮುತ್ತಲಿನ ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕೆಂದು ನಗರ ಮತ್ತು ಪಟ್ಟಣಕ್ಕೆ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಓಡಾಡಬೇಕಿದ್ದು, ಸರ್ಕಾರಿ ಬಸ್ಗಳನ್ನೇ ಅವಲಂಬಿಸಬೇಕಿದೆ.
ಬಸ್ಗಳು ಮೊದಲೇ ಪ್ರಯಾಣಿಕರಿಂದ ತುಂಬಿ ಬರುವುದರಿಂದ ಸ್ಟಾಪ್ (Stop) ಕೊಡದೆ ಹೋಗುವುದರಿಂದ ಕೆಲವೊಮ್ಮೆ ಶಾಲೆಗೆ ತಪ್ಪಿಸಬೇಕಿದೆ ಎಂದು ವಿದ್ಯಾರ್ಥಿಗಳ ಹಾಗೂ ಪೋಷಕರ ಬೇಸರ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ ಹಾಗೂ ಸಂಜೆ ವಿದ್ಯಾರ್ಥಿಗಳು ತುಮಕೂರು ವಿಶ್ವವಿದ್ಯಾಲಯದ ಎದುರು ನಗರ ಸಾರಿಗೆ ಹತ್ತಲು ಮುಗಿಬೀಳುವ ದೃಶ್ಯ ಪ್ರತಿದಿನ ನೋಡಬಹುದು.
ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತುಂಬಿ ತುಳುಕುತ್ತಿರುವ ಬಸ್ನಲ್ಲಿ ನೇತಾಡಿಕೊಂಡು ಬಸ್ (Bus)ನಿಲ್ದಾಣಕ್ಕೆ ಪ್ರಯಾಣಿಸಬೇಕಾದ ದುಸ್ಥಿತಿ ಬಂದಿದೆ. ಈ ಕುರಿತು ಪದೇ ಪದೆ ಸಂಬಂಧಪಟ್ಟವರ ಗಮನಕ್ಕೆ
ತಂದರೂ ಪ್ರಯೋಜನವಾಗುತ್ತಿಲ್ಲಎಂಬುದು ವಿಪರ್ಯಾಸ. ಇನ್ನು ತುಮಕೂರು ವಿಶ್ವವಿದ್ಯಾಲಯದ ಎದುರು ಬಸ್ ಹತ್ತುವ ಆತುರದಲ್ಲಿ ವಿದ್ಯಾರ್ಥಿನಿಯೊಬ್ಬರು ಕೆಳಕ್ಕೆ ಬಿದ್ದಿದ್ದನ್ನು ಪತ್ರಿಕೆ ವರದಿ ಮಾಡಿತ್ತು.
ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ವಿದ್ಯಾರ್ಥಿಗಳ ಸುರಕ್ಷತೆಗೆ ಗಮನಕೊಡುವುದಿಲ್ಲ. ತುಂಬಿದ ಬಸ್ನಲ್ಲಿ ನೂಕುನುಗ್ಗಲಲ್ಲಿ ಪ್ರಯಾಣಿಸುವುದು ವಿದ್ಯಾರ್ಥಿನಿಯರಿಗೆ ಸಾಕಷ್ಟು ಹಿಂಸೆ, ಮುಜುಗರವನ್ನುಂಟು ಮಾಡುತ್ತಿದೆ.
ಲಭ್ಯ ಮಾಹಿತಿಗಳ ಪ್ರಕಾರ ಸುಮಾರು 200ಕ್ಕೂ ಹೆಚ್ಚು ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲ. ಆದರೆ ಈ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಖಾಸಗಿ ವಾಹನ ನೆಚ್ಚಿಕೊಂಡು ಶಾಲಾ-ಕಾಲೇಜುಗಳಿಗೆ (College)
ಹೋಗಿ ಬರಬೇಕು. ಇಲ್ಲವೇ ಕಿಮೀ ಗಟ್ಟಲೆ ನಡೆದು ಬಸ್ ಹಿಡಿಯಬೇಕು. ಗ್ರಾಮೀಣ ಭಾಗಗಳಲ್ಲಿರುವ ವಯೋವೃದ್ಧರು ಆಸ್ಪತ್ರೆಗೆ ಹೋಗಿ ಬರುವುದು ಸಹ ಕಷ್ಟ.
ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷವಾದರೂ ಇನ್ನೂ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಮರೀಚಿಕೆ ಎಂಬುದು ಬೇಸರದ ಸಂಗತಿಯಾಗಿದ್ದು, ಅವಶ್ಯಕತೆ ಇರುವ ಎಲ್ಲಾ ರೂಟ್ಗಳಿಗೂ (Route)
ಬಸ್ ಬಿಡಲಾಗುತ್ತಿದ್ದು, ಹೆಚ್ಚಿನ ಜನಸಂದಣಿಯ ಕಾರಣ ಮತ್ತಿಹಳ್ಳಿ, ಹಾಲ್ಕುರಿಕೆ ಮಾರ್ಗ ಮತ್ತು ತಿಮ್ಲಾಪುರ ಮಾರ್ಗವಾಗಿ ಹೊನ್ನವಳ್ಳಿಗೆ ಹೆಚ್ಚುವರಿ ಬಸ್ ಬಿಡಲಾಗುತ್ತದೆ ಎಂದು ತಿಪಟೂರು (Tipatur)
ಡಿಪೊ ಮ್ಯಾನೇಜರ್, ರವಿಶಂಕರ್ (Ravishankar) ಹೇಳಿದ್ದಾರೆ.
ಭವ್ಯಶ್ರೀ ಆರ್.ಜೆ