Bengaluru: ಇನ್ಫೋಸಿಸ್(Infosys) ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ (Chetan Ahimsa against SudhaMurthy) ಅವರ ಪತ್ನಿ ಸುಧಾ ಮೂರ್ತಿ ಅವರು ವೆಜ್ ಮತ್ತು
ನಾನ್ ವೆಜ್ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social Media) ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಹಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು
ಬೆಂಬಲಕ್ಕೆ ನಿಂತರು. ಆದರೆ ಈ ಬಗ್ಗೆ ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ (Chetan Ahimsa) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ ಚೇತನ್,
ಸುಧಾ ಮೂರ್ತಿ ಅವರು ಬಿಲ್ಡಪ್ನಿಂದ ಗುರುತಿಸಲ್ಪಟ್ಟ ವ್ಯಕ್ತಿ, ಅವರ ಆಲೋಚನೆ ಚಮಚದಷ್ಟು ಎಂದು ಸುಧಾ ಮೂರ್ತಿ ಅವರನ್ನು ಲೇವಡಿ ಮಾಡಿದ್ದಾರೆ.
ಯೂಟ್ಯೂಬ್ (Youtube) ವಾಹಿನಿಗೆ ಇತ್ತೀಚೆಗಷ್ಟೆ ನೀಡಿದ ಸಂದರ್ಶನದಲ್ಲಿ ಸುಧಾ ಮೂರ್ತಿ ಮಾತನಾಡಿ ಸಸ್ಯಹಾರಿ (Veg) ಮತ್ತು ಮಾಂಸಹಾರಿಯ (Nonveg) ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದರು. ಮೂಲತಃ
ಸುಧಾ ಮೂರ್ತಿ ಅವರು ಶುದ್ಧ ಸಸ್ಯಹಾರಿ. ಅನೇಕ ಕಡೆ ಒಂದೇ ಚಮಚವನ್ನು ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರಗಳಿಗೆ ಬಳಸುತ್ತಾರೆ. ಹಾಗಾಗಿ ನಾನು ಎಲ್ಲಿಯೇ ಹೋದರು ಕೂಡ ಒಂದು ಚಮಚ
ತೆಗೆದುಕೊಂಡು ಹೋಗುತ್ತೇನೆ (Chetan Ahimsa against SudhaMurthy) ಎಂದು ಹೇಳಿದ್ದರು.

ಚೇತನ್ ಹೇಳಿಕೆ
“ಸುಧಾ ಮೂರ್ತಿಯವರು ನಮ್ಮ ಬ್ರಾಹ್ಮಣ ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್ನಿಂದ ಮತ್ತು ಅನರ್ಹ ಗೌರವದಿಂದ ಗುರುತಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ. ಅವರ ನಿರಂತರ ವಾಕ್ಚಾತುರ್ಯವು
ಅವರ ಸಂಕುಚಿತ ಮನೋಭಾವವನ್ನು ಬಹಿರಂಗಪಡಿಸುತ್ತದೆ. ಅವರು ತನ್ನ ಸೀಮಿತ, ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ಅನೇಕ ಬಾರಿ ನಿರಂತರವಾಗಿ ಮಾಡುತ್ತಾರೆ.
ಸುಧಾ ಮೂರ್ತಿ ಹೆಚ್ಚು ಮಾತನಾಡಬೇಕು. ಅವರ ಸಂಪತ್ತು ಜಗದಗಲ, ತಿಳುವಳಿಕೆ ಚಮಚದಗಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಹಣ ಕೇಳುವ ಸೈಬರ್ ಸೆಂಟರ್ಗಳ ಪರವಾನಗಿ ರದ್ದು: ಸರ್ಕಾರದ ಎಚ್ಚರಿಕೆ
ನಟ ಚೇತನ್ ಹೇಳಿಕೆಗೆ ಹಲವರು ಕಮೆಂಟ್ (Comment) ಮಾಡಿ ಸುಧಾ ಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರಲ್ಲಿ ಒಬ್ಬರು ಅವರೊಬ್ಬರು ಬ್ರಾಹ್ಮಣ ಮಹಿಳೆ ಅಷ್ಟೆ ಎಂದು ಹೇಳುತ್ತಿದ್ದಾರೆ.
ಚೇತನ್ ವಿರುದ್ಧ ಇನ್ನು ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ. ಅವರವರ ಆಹಾರ ಕ್ರಮ ಅದು ಕೇಳೊಕೆ ನೀವ್ಯಾರು, ಇದೆಲ್ಲ ನಿಮಗೆ ಯಾಕೆ ಬೇಕು, ಎಂದು ಹೇಳುತ್ತಿದ್ದಾರೆ.

ಅಸಲಿಗೆ ಸುಧಾ ಮೂರ್ತಿ ಹೇಳಿದ್ದೇನು?
‘ ನಾನು ಮೊಟ್ಟೆ(Egg) ಅಥವಾ ಬೆಳ್ಳುಳ್ಳಿಯನ್ನು(Garlic) ಸಹ ತಿನ್ನುವುದಿಲ್ಲ ಏಕೆಂದರೆ ನಾನು ಶುದ್ಧ ಸಸ್ಯಾಹಾರಿ (Vegetarian). ಬೇರೆ ಬೇರೆ ಕಡೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಕೆಲವು ಕಡೆ
ಒಂದೇ ಚಮಚವನ್ನು ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡಕ್ಕೂ ಬಳಸುತ್ತಾರೆ ಎನ್ನುವ ಭಯವಾಗುತ್ತೆ. ಆ ವಿಷಯವು ನನ್ನ ಮನಸ್ಸನ್ನು ತುಂಬಾ ಭಾರವಾಗಿಸುತ್ತದೆ. ಹಾಗಾಗಿ ಮುಖ್ಯವಾಗಿ ಸಸ್ಯಾಹಾರಿ
ರೆಸ್ಟೊರೆಂಟ್ಗಳನ್ನು (Restaurent) ವಿದೇಶಿ ಪ್ರವಾಸಕ್ಕೆ ಹೋದಾಗ ಹುಡುಕುತ್ತೇನೆ ಅಥವಾ ತನಗೆ ಬೇಕಾದ ಊಟವನ್ನು ನಾನೇ ತಯಾರಿಸಿಕೊಂಡು ಹೋಗುತ್ತೇನೆ. ನೀರಿನಲ್ಲಿ ಸುಲಭವಾಗಿ ಬಿಸಿಮಾಡಬಹುದಾದ
ಆಹಾರ ಮತ್ತು ಅಡುಗೆ ವಸ್ತುಗಳನ್ನು ನನ್ನ ಬ್ಯಾಗ್ನಲ್ಲಿ ಇಟ್ಟುಕೊಂಡಿರುತ್ತೇನೆ ಎಂದು ಹೇಳಿದರು. ಸುಧಾ ಮೂರ್ತಿ ಅವರ ಈ ಹೇಳಿಕೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ರಶ್ಮಿತಾ ಅನೀಶ್