ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಕಂಡರೆ ಪ್ರಧಾನಿಗೆ ಅಷ್ಟೊಂದು ಭಯವೇ? : ಕಾಂಗ್ರೆಸ್

Mallikarjun Kharghe

ರಾಜ್ಯಸಭೆಯ(Rajyasabha) ವಿಪಕ್ಷ ನಾಯಕ(Opposition Leader) ಮಲ್ಲಿಕಾರ್ಜುನ್‌ ಖರ್ಗೆ(Mallikarjun Kharghe) ಅವರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು(Congress Party) ಕಂಡರೆ ಪ್ರಧಾನಿಗೆ ಅಷ್ಟೊಂದು ಭಯವೇ?

ಅವರ ಪ್ರಶ್ನೆಗಳನ್ನು ಎದುರಿಸಲು ಅಷ್ಟೊಂದು ಹಿಂಜರಿಕೆಯೇ? ಇ.ಡಿ(ED) ಸಂಸ್ಥೆಯನ್ನು ಮುಂದಿಟ್ಟು ಪ್ರಶ್ನೆಗಳಿಂದ ಪಲಾಯನ ಮಾಡುವ ಬಿಜೆಪಿಯ(BJP) ತಂತ್ರಗಳು ನಡೆಯದು.

ಉತ್ತರ ಕೊಡಬೇಕಾದವರು ಉತ್ತರಕುಮಾರನಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್‌, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ.


ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಇ.ಡಿ ಸಮನ್ಸ್‌(Summons) ನೀಡಿರುವುದನ್ನು ಖಂಡಿಸಿ ಸರಣಿ ಟ್ವೀಟ್‌(Tweet) ಮಾಡಿರುವ ಕಾಂಗ್ರೆಸ್‌, ಬಿಜೆಪಿಯ ಧಮನಕಾರಿ ನೀತಿಗಳಿಂದ ಕಾಂಗ್ರೆಸ್ನ ಧ್ವನಿಯನ್ನು ಅಡಗಿಸಲಾಗದು.

ರಾಜ್ಯಸಭೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ್‌ ಖರ್ಗೆ ಅವರು ಸಂಸತ್ ಅಧಿವೇಶನದಲ್ಲಿ ಇರುವಾಗಲೇ ಸರ್ಕಾರ ಇ.ಡಿಯಿಂದ ಸಮನ್ಸ್ ಜಾರಿ ಮಾಡಿಸಿ ಸಂಸತ್ತಿನಲ್ಲಿ ಖರ್ಗೆಯವರ ಪ್ರಶ್ನೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ. ಇದು ಹೇಡಿಗಳ ಲಕ್ಷಣವೇ ಹೊರತು ಪ್ರಜಾಪ್ರಭುತ್ವವಾದಿಗಳದ್ದಲ್ಲ ಎಂದು ಟೀಕಿಸಿದ್ದಾರೆ.


ಇನ್ನು ಉಪರಾಷ್ಟ್ರಪತಿ ಚುನಾವಣೆಗೂ ಮುನ್ನ ಇ.ಡಿ ಉದ್ದೇಶಪೂರ್ವಕವಾಗಿ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಹೇಳಿಕೆ ನೀಡಲು ಕರೆ ನೀಡುತ್ತಿದೆ, ಈ ಚುನಾವಣೆಗೂ ಮುನ್ನ ಇಡಿ ದುರ್ಬಳಕೆಯಾಗುತ್ತಿದೆ. ನೀವು ಮೊದಲ ಬಾರಿಗೆ ಕರೆ ಮಾಡುತ್ತಿರುವುದು ಕೂಡ ಅಲ್ಲ, ಈ ಹಿಂದೆಯೂ ವಿಚಾರಣೆ ನಡೆದಿದೆ. ಸದನದ ಕಲಾಪಗಳ ನಂತರ ಕರೆಯಬಹುದಿತ್ತು.

ಸಂಸತ್ ಕಲಾಪ ನಡೆಯುತ್ತಿರುವಾಗ ಪ್ರತಿಪಕ್ಷದ ನಾಯಕನನ್ನು ಇ.ಡಿ ಅಥವಾ ಇನ್ನಾವುದೇ ತನಿಖಾ ಸಂಸ್ಥೆಯು ಹೇಳಿಕೆ ನೀಡಲು ಕರೆದದ್ದು, ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಹೇಳಿದ್ದಾರೆ.


ಪೆಟ್ರೋಲ್, ಡೀಸೆಲ್ಗಳ ಬೆಲೆ ಏರಿಕೆ ಬಗ್ಗೆ ಮೋದಿಯವರು ‘ಮನ್ ಕಿ ಬಾತ್’ ಆಡುವುದೇ ಇಲ್ಲ. ಅವರ ಪಕ್ಷವೂ ಕೂಡ ಮೌನಕ್ಕೆ ಜಾರುತ್ತದೆ. ಇಂಧನ ತೈಲಗಳ ಮೇಲಿನ ತೆರಿಗೆ ಏರಿಸಿ ಬಡವರ ಸುಲಿಗೆ ಮಾಡುವುದನ್ನೇ ಸಾಧನೆ ಎಂದುಕೊಂಡಿರುವ ಸರ್ಕಾರ ಎಂದಿಗೂ ಜನಪರವಾಗಿ ಯೋಚಿಸಲಾರದು.

ಏಕೆಂದರೆ ಅವರಿಗೆ ‘ಸುಲಿಗೆ’ಯೇ ಸಾಧನೆ. ಇನ್ನು ಡಾಲರ್ ಎದುರು ರೂಪಾಯಿ ಐತಿಹಾಸಿಕವಾಗಿ ದಾಖಲೆ ಮಟ್ಟದಲ್ಲಿ ಕುಸಿದಿದೆ, ಮೋದಿಯವರ 8 ವರ್ಷಗಳ ಅವಧಿಯಲ್ಲಿ ರೂಪಾಯಿ ಕುಸಿತದ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ.

ವೈಫಲ್ಯ ಮುಚ್ಚಿಕೊಳ್ಳಲು ‘ಮೌನ’ ಪರಿಹಾರ, ದುರಾಡಳಿತ ಮುಚ್ಚಿಕೊಳ್ಳಲು ‘ಮಾತು’ ಪರಿಹಾರ ಎಂದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
Exit mobile version