ಸಿ.ಟಿ. ರವಿ ಅವರಿಗೆ ಪಿತೃ ವಿಯೋಗ!

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಟಿ ರವಿ ಅವರ ತಂದೆ ಇಂದು ವಿಧಿವಶರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶಾಸಕ ಸಿ.ಟಿ ರವಿ ಅವರ ತಂದೆ ಸಿ.ಈ ತಿಮ್ಮೇಗೌಡ (92) ರವರು ವಯೋಸಹಜ ಕಾಯಿಲೆಯಿಂದ ಇಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಇವರ ಪಾರ್ಥೀವ ಶರೀರವು ಇಂದು ಸಂಜೆ ಸ್ವಗ್ರಾಮಕ್ಕೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.


ತಿಮ್ಮೇಗೌಡ ಅವರ ಅಂತಿಮ ದರ್ಶನದ ವ್ಯವಸ್ಥೆಯನ್ನು ಜನವರಿ 30ರ ಬೆಳಗ್ಗೆ 06 ಗಂಟೆಯಿಂದ 11.30 ರ ವರೆಗೆ ಆಲ್ದೂರಿನಲ್ಲಿ ಕಲ್ಪಿಸಲಾಗಿದೆ ಹಾಗೂ ಅಂತ್ಯ ಸಂಸ್ಕಾರವು ಆಲ್ದೂರಿನಲ್ಲೇ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಅನೇಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

Exit mobile version