ದಲಿತ ಬಾಲಕಿಯರ ಕೊಲೆ ಪ್ರಕರಣ: ಕೊಲೆ ರಹಸ್ಯ ತೆರೆದಿಟ್ಟ ಸಿಗರೇಟ್ ತುಂಡು

ಉತ್ತರ ಪ್ರದೇಶ, ಫೆ. 20: ಎರಡು ದಿನಗಳ ಹಿಂದೆ ಜಾನುವಾರುಗಳಿಗೆ  ಮೇವು ತರಲು ಹೋದ ಮೂವರು ಅಕ್ಕ ತಂಗಿ ಬಾಲಕಿಯರಲ್ಲಿ ಇಬ್ಬರು ಹೊಲದಲ್ಲಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಉನ್ನಾವೋದ ಬಾಬುಹಾರ ಗ್ರಾಮದಲ್ಲಿನಡೆದಿದೆ. ಮತ್ತೊಬ್ಬ ಬಾಲಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದು ಈ ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಮೃತದೇಹಗಳಲ್ಲಿ ವಿಷದ ಅಂಶವಿದ್ದುದಾಗಿ ವೈದ್ಯರು ತಿಳಿಸಿದ್ದರು.

ಆದರೆ ವಿಷ ಹೇಗೆ ಬಾಲಕಿಯರಲ್ಲಿ ಸೇರಿತು, ಯಾರು ಕೃತ್ಯ ಎಸಗಿದ್ದಾರೆ? ಇದು ಕೊಲೆಯೇ ಆತ್ಮಹತ್ಯೆಯೇ ಎಂಬ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಪ್ರಕರಣ ನಡೆದ ಒಂದೇ ದಿನದಲ್ಲಿ ಪೊಲೀಸರು ಸಾವಿನ ಹಿಂದಿನ ರಹಸ್ಯ ಬೇಧಿಸಿದ್ದಾರೆ. ಆರೋಪಿ ವಿನಯ್ ಅಲಿಯಾಸ್ ಲಂಬು (18) ಎಂಬುವನನ್ನು ಬಂಧಿಸಿದ್ದಾರೆ. ತಾನೇ ವಿಷ ಹಾಕಿ ಕೊಂದಿದ್ದು ಎಂದು ಆತ ಒಪ್ಪಿಕೊಂಡಿದ್ದಾನೆ. ಆದರೆ ಈ ಕೊಲೆಗೆ ಕಾರಣ, ಮೂವರಲ್ಲಿ ಒಬ್ಬಾಕೆಯನ್ನು ಆತ ಪ್ರೀತಿಸುತ್ತಿದ್ದ. ಆದರೆ  ಇವನ ಪ್ರೀತಿಯನ್ನ ಆಕೆ ನಿರಾಕರಿಸಿದ್ದಾಳೆ.

Exit mobile version