ಕುಂವೀ, ನಟ ಪ್ರಕಾಶ್ ರಾಜ್ ಸೇರಿದಂತೆ 16 ಮಂದಿಗೆ ಬೆದರಿಕೆ ಪತ್ರ!

Politics

ಖ್ಯಾತ ನಟ(Actor) ಪ್ರಕಾಶ್ ರಾಜ್(Prakash Raj) ಮತ್ತು ಸಾಹಿತಿ(Poet) ಕುಂ. ವೀರಭದ್ರಪ್ಪ(Kum Veerbhadrappa) ಸೇರಿದಂತೆ 16 ಮಂದಿ ಎಡಪಂಥೀಯ ಚಿಂತಕರಿಗೆ ಜೀವ ಬೆದರಿಕೆ ಪತ್ರ ಬಂದಿದೆ.

ಇನ್ನು ಈ ಕುರಿತು ಸಾಹಿತಿ ಕುಂ. ವೀರಭದ್ರಪ್ಪ ವಿಜಯನಗರ ಜಿಲ್ಲೆಯ(Vijayanagar District) ಕೊಟ್ಟೂರು(Kottur) ಪಟ್ಟಣದಲ್ಲಿರುವ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ. ಈ ಹಿಂದೆಯೂ ಸಾಹಿತಿ ಕುಂ. ವೀರಭದ್ರಪ್ಪನವರಿಗೆ ಚಿತ್ರದುರ್ಗ(Chitradurga) ಮತ್ತು ಭದ್ರಾವತಿಯಿಂದಲೂ(Bhadravathi) ಜೀವ ಬೆದರಿಕೆ ಪತ್ರಗಳು ಬಂದಿದ್ದವು. ಈ ಪತ್ರದಲ್ಲಿ “ಮಿಸ್ಟರ್ ಕುಂ. ವೀರಭದ್ರಪ್ಪನವರೇ, ನನಗೆ ಪೇಪರ್ ಹುಲಿ ಆಗುವುದಕ್ಕೆ ಇಷ್ಟವಿದ್ದರೇ, ನಿಮ್ಮ ಮೇಲೆ ನೇರವಾಗಿ ದಾಳಿ ಮಾಡಿ ನಾನೇ ಪೊಲೀಸರಿಗೆ ಶರಣಾಗುತ್ತಿದ್ದೆ.

ಆದರೆ ನನಗೆ ಪೇಪರ್ ಹುಲಿ ಆಗಲು ಇಷ್ಟವಿಲ್ಲ. ಹೀಗಾಗಿ ಈ ಪತ್ರ ಬರೆಯುತ್ತಿದ್ದೇನೆ. ನಾನು ಒಬ್ಬಂಟಿಯಾಗಿ ಹೋರಾಟ ಮಾಡುತ್ತೇನೆ” ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಇನ್ನು ಈ ಬೆದರಿಕೆ ಪತ್ರದ ಕುರಿತು ಸೂಕ್ತ ತನಿಖೆ ನಡೆಸುವಂತೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಉನ್ನತ ಪೊಲೀಸ್ ಆಧಿಕಾರಿಗಳಿಂದ ಸೂಚನೆ ನೀಡಲಾಗಿದೆ. ಕುಂ. ವೀರಭದ್ರಪ್ಪನವರಿಗೆ ಇದು 3ನೇ ಬೆದರಿಕೆ ಪತ್ರವಾಗಿದ್ದು, ವಿಜಯನಗರ ಜಿಲ್ಲಾ ಪೊಲೀಸರು ಈ ಕುರಿತು ಗಂಭೀರ ತನಿಖೆ ನಡೆಸಲು ಮುಂದಾಗಿದ್ದಾರೆ.

ಕುಂ.ವೀರಭದ್ರಪ್ಪನವರು ನನಗೆ ಸೂಕ್ತ ರಕ್ಷಣೆ ನೀಡುವಂತೆ ವಿಜಯನಗರ ಜಿಲ್ಲಾ ಎಸ್ಪಿ ಡಾ. ಅರುಣ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಇನ್ನು ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಬೆದರಿಕೆ ಪತ್ರ ಬಂದಿತ್ತು. ಈಗ ಮತ್ತೆ ಬೆದರಿಕೆ ಪತ್ರ ಬಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

Exit mobile version