Bengaluru: ಕಳೆದ ಕೆಲ ದಿನಗಳಿಂದ ಎಲ್ಲರ ಗಮನ ಸೆಳೆದು ತಣ್ಣಗಾಗಿರುವ ರೇಣುಕ ಸ್ವಾಮಿ ಹತ್ಯೆ ಪ್ರಕರಣದ (Renukaswamy Murder Case) ತನಿಖೆಯನ್ನು ಪೊಲೀಸರು ಹಲವು ಆಯಾಮಗಳಿಂದ ನಡೆಸುತ್ತಿದ್ದು ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಿ ಸೆರೆಮನೆಯಲ್ಲಿ ಇರಿಸಿದ್ದಾರೆ.
![](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/06/darshan-5-1024x576.webp)
ಇನ್ನು ಈ ಪ್ರಕರಣದ ಕುರಿತಾಗಿ ಕನ್ನಡ ಸುದ್ದಿವಾಹಿನಿ ಬಿಟಿವಿಯಲ್ಲಿ ಹಲವಾರು ಸುದ್ದಿಗಳು ವರ್ಣ ರಂಜಿತವಾಗಿ ಪ್ರಸಾರವಾಗಿತ್ತು. ಆದರೆ ಇದೀಗ ಅಪರಾಧಿಗಳೊಂದಿಗೆ ತನ್ನ ಹೆಸರನ್ನು ಸೇರಿಸಿ ಮಾದ್ಯಮಗಳ ಮುಂದೆ ಸುದ್ದಿ ಪ್ರಸಾರ ಮಾಡಿರುವ ಕುರಿತಾಗಿ ರಜಿನಿ ಎಕ್ಸ್ ಪ್ರೆಸ್ (Rajini Express) ಯುಟ್ಯೂಬರ್ ರಜಿನಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಈ ಹಿಂದೆ ಬಿಟಿವಿ (BTV)ಯಲ್ಲಿ ಅಸಲಿಗೆ ರೇಣುಕಾ ಸ್ವಾಮಿ ಕಾಮೆಂಟ್ ಮಾಡಿರುವುದೇ ಪವಿತ್ರ ಗೌಡಗೆ ಗೊತ್ತಿರಲಿಲ್ಲವಂತೆ. ರಜನಿ ಎಕ್ಸ್ಪ್ರೆಸ್ ಎಂಬ ಯುಟ್ಯೂಬ್ ಚಾನೆಲ್ ನಡೆಸುವ ರಜನಿ ಎಂಬ ಯುಟ್ಯೂಬರ್ ಹಾಗೂ ದರ್ಶನ್ ಪಟಾಲಮ್ಮಗೆ ಈ ಯುವತಿ ಪವಿತ್ರ ಗೌಡಗೆ ಮಾಹಿತಿ ಕೊಟ್ಟಿದ್ದಂತೆ. ಅದಾದ ನಂತರ ಪವಿತ್ರ ಗೌಡ ರೊಚ್ಚಿಗೆದ್ದು ದರ್ಶನ್ (Darshan)ಗೆ ಈ ವಿಚಾರ ತಿಳಿಸಿ ನಂತರ ಭೀಕರ ಕೊಲೆಯಲ್ಲಿ ಪ್ರಕರಣ ಅಂತ್ಯವಾಯಿತು ಎಂದೆಲ್ಲ ಸುಳ್ಳು ಮಾಹಿತಿ ಪ್ರಕಟಿಸಿರುವ ಕಾರಣ ರಜಿನಿ ಈ ನಿರ್ಧಾರ ಕೈಗೊಂಡಿದ್ದಾರೆಂದು ಹೇಳಿದ್ದಾರೆ.
![Defamation](https://sp-ao.shortpixel.ai/client/to_webp,q_glossy,ret_img,w_700,h_467/https://vijayatimes.com/wp-content/uploads/2024/07/blog_full_defamation-law.jpg)
ಲಾಯರ್ ಮುಖಾಂತರ ಸಿಟಿ ಸಿವಿಲ್ ಕೋರ್ಟ್ (City Civil Court) ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಅವರು ತನ್ನ ವಿರುದ್ಧ ಟಿವಿ, ವೆಬ್ ಸೈಟ್, ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಹೇಳಿಕೆ ನೀಡಿರುವ ಕಾರಣದಿಂದ ಬಿಟಿವಿ ಸುದ್ದಿ ವಾಹಿನಿಯ ವಿರುದ್ಧ ಹಾಗೂ ಅದರ ಮಾಲೀಕರಾದ ಜಿಎಂ ಕುಮಾರ್ (G M Kumar)ಅಲ್ಲದೆ ಆಂಕರ್ ಶಿಲ್ಪ ಗೌಡ, ಪ್ರೀತಂ ಕೆಮ್ಮಾಯಿ, ಕುಸುಮಾ, ಶಿವಶಂಕರ್, ರಕ್ಷಾ (Shivashankar, Raksha) ಹಾಗೂ ಈ ಸುದ್ದಿಯ ಕುರಿತು ಬರೆದಿರುವ ಸ್ಕ್ರಿಪ್ಟ್ ಬರಹಗಾರರನ್ನು ಸೇರಿಸಿ ಮಾನನಷ್ಟ ಮೊಕದ್ದಮೆಯ ಕೇಸ್ ದಾಖಲಿಸಿದ್ದೇನೆ . ಮುಂದಿನ ದಿನಗಳಲ್ಲಿ ಸುಳ್ಳು ಸುದ್ದಿ ಬಿತ್ತರಿಸುವವರಿಗೆ ಇದು ಒಳ್ಳೆಯ ಪಾಠವಾಗುತ್ತದೆ ಎಂದು ರಜಿನಿ ಎಕ್ಸ್ ಪ್ರೆಸ್ ಯುಟ್ಯೂಬರ್ (Youtuber) ರಜಿನಿ ಎಚ್ಚರಿಕೆ ನೀಡಿದ್ದಾರೆ.