Bank : ತಮ್ಮ ಆದಾಯದಲ್ಲಿ ಸ್ವಲ್ಪಮೊತ್ತದ ಹಣವನ್ನು ದುಡಿಯುತ್ತಿರುವ ಜನರು ಭವಿಷ್ಯದ ಬಳಕೆಗಾಗಿ ಎಂದು ಉಳಿತಾಯ (deposited five lakhs more) ಮಾಡಿ ಇಡುತ್ತಾರೆ.
ಬ್ಯಾಂಕ್ ಖಾತೆಗಳು ಈ ರೀತಿ ಉಳಿತಾಯ ಮಾಡಲು ಸೇಫ್ ಎಂದು ಅನೇಕರ ಭಾವನೆ. ಹೀಗಾಗಿ ಮಕ್ಕಳ ವಿದ್ಯಾಭ್ಯಾಸ, ಭವಿಷ್ಯದಲ್ಲಿ ಮನೆ ಅಥವಾ ಸೈಟ್ ಖರೀದಿಸಲು ಅಥವಾ ವಿದೇಶ
ಪ್ರಯಾಣ ಅಥವಾ ನಿವೃತ್ತಿ ಹೊಂದಿದಾಗ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ತೆರೆದು ತಮ್ಮ ಕೈಲಾದಷ್ಟು ಸ್ವಲ್ಪಮೊತ್ತದ ಹಣವನ್ನು ಅದರಲ್ಲಿ ಇಟ್ಟುಕೊಳ್ಳುತ್ತಾರೆ.
ಕೆಲವರು ಅದೇ ಬ್ಯಾಂಕ್ ಗಳಲ್ಲಿ ಇದನ್ನು ಡೆಪಾಸಿಟ್ (Deposit) ಇಡುತ್ತಾರೆ ಏಕೆಂದರೆ ಉಳಿತಾಯ ಖಾತೆಯಲ್ಲಿ ಇಡುವ ಹಣ ಹೆಚ್ಚು ಲಾಭ ಕೊಡುವುದಿಲ್ಲ ಎನ್ನುವ ಕಾರಣಕ್ಕೆ . ಆದರೆ ಇದೀಗ ಬಂದಿರುವ
RBI ಹೊಸ ನಿಯಮದ ಬಗ್ಗೆ ಈ ರೀತಿ ಡೆಪಾಸಿಟ್ ಮಾಡುವವರೆಲ್ಲಾ (deposited five lakhs more) ತಿಳಿದುಕೊಂಡಿರಲೇಬೇಕು.
ಇತ್ತೀಚಿನ ದಿನಗಳಲ್ಲಿ ನಾವು ಮಾಧ್ಯಮ (Media) ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಬ್ಯಾಂಕ್ ಗಳು ದಿವಾಳಿ ಆಗುತ್ತಿರುವುದರ ಬಗ್ಗೆ ನೋಡುತ್ತಿದ್ದೇವೆ. ಆದ್ದರಿಂದ ನಾವು ನಮ್ಮ
ಹಣವನ್ನು ಯಾವ ಬ್ಯಾಂಕ್ನಲ್ಲಿ ಹೂಡಿಕೆ ಮಾಡುತ್ತೇವೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕಡಿಮೆ ಸಮಯದಲ್ಲಿ ನಿಮ್ಮ ಹಣದಿಂದ ನಿಮಗೆ ಹೆಚ್ಚು ಲಾಭ ಬರುತ್ತದೆ ಎನ್ನುವ ಕಾರಣಕ್ಕಾಗಿ ಹಣ
ಹೂಡಿಕೆಯನ್ನು ಅಸುರಕ್ಷಿತ ವಲಯದಲ್ಲಿ ಮಾಡಿದರೆ ನಿಮ್ಮ ಹಣವನ್ನು ಕೂಡ ನೀವು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.
ಇದನ್ನೂ ಓದಿ : ಯುಐಡಿಎಐ ಎಚ್ಚರಿಕೆ ! ಆಧಾರ್ ಅಪ್ಡೇಟ್ ಮಾಡಲು ಇಮೇಲ್, ವಾಟ್ಸಾಪ್ನಲ್ಲಿ ದಾಖಲೆ ಕಳುಹಿಸದಿರಿ
ಒಂದು ವೇಳೆ ನೀವು ಚೆನ್ನಾಗಿ ನಡೆದುಕೊಂಡು ಹೋಗುತ್ತಿರುವ, ಅಥವಾ ದೇಶದ ಹೆಸರಾಂತ ಬ್ಯಾಂಕ್ ಎಂದು ಕರೆಸಿಕೊಂಡಿರುವ ಅಥವಾ ಅತಿ ಹೆಚ್ಚು ಜನರು ನಂಬಿಕೆಯಿಂದ ಹೂಡಿಕೆ ಮಾಡುವ
ಬ್ಯಾಂಕ್ ಗಳಲ್ಲಿ ಸಹ ನಿಮ್ಮ ಹಣವನ್ನು ಹೂಡಿಕೆ ಮಾಡಿದಾಗಲೂ ಸಹ ಕೆಲವೊಂದು ಯಾವುದೇ ಸಂದರ್ಭದಲ್ಲಿ ಆ ಬ್ಯಾಂಕ್ ಒಂದು ವೇಳೆ ದಿವಾಳಿಯಾದರೆ (Bankruptcy) ಏನಾಗುತ್ತದೆ
ಎನ್ನುವುದರ ಬಗ್ಗೆ ತಿಳಿದುಕೊಂಡಿರಬೇಕು.
ಸರ್ಕಾರಿ ಬ್ಯಾಂಕ್ ಗಳು (Government bank), ರಾಷ್ಟ್ರೀಕೃತ ಬ್ಯಾಂಕ್ ಗಳು, ಹಾಗೂ ಖಾಸಗಿ ಬ್ಯಾಂಕ್ ಗಳಿಗೂ (Private bank) ಕೂಡ RBI ಬ್ಯಾಂಕ್ ಗಳಿಗೆ ಹೇರುವ ನೀತಿ ನಿಯಮಗಳು
ಅನ್ವಯವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಬ್ಯಾಂಕ್ ಗಳಲ್ಲಿ ಇಡುವ ಡೆಪಾಸಿಟ್ ಹಣದ ಸುರಕ್ಷತೆ ಬಗ್ಗೆ ಅದೇ ರೀತಿ RBI ಈಗ ಎಲ್ಲಾ ಹಣಕಾಸಿನ ಸಂಸ್ಥೆಗೆ ಕೂಡ DICGC ನಿಯಮವನ್ನು
ಅನ್ವಯವಾಗುವಂತೆ ಜಾರಿಗೆ ತಂದಿದೆ. ಈ ನಿಯಮ 2020 ಅಲ್ಲಿ ಬದಲಾಗಿದ್ದು ಇದನ್ನು ಕ್ಯಾಬಿನೆಟ್(Cabinet) ಮೀಟಿಂಗ್ ಅಲ್ಲಿ ಮಾನ್ಯ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Finance
Minister Nirmala Sitharaman) ಅವರೇ ಪ್ರಸ್ತಾಪಿಸಿದ್ದರು.
ಇದನ್ನೂ ಓದಿ : ಸಾಲ ಪಡೆದ ವ್ಯಕ್ತಿ ವಕೀಲನೇ ಆಗಿರಲಿ, ನ್ಯಾಯಾಧೀಶರಾಗಿರಲಿ ರಕ್ಷಣೆ ನೀಡಲಾಗದು: ಹೈಕೋರ್ಟ್ ಸ್ಪಷ್ಟನೆ
ಆ ಪ್ರಕಾರವಾಗಿ ಜನಸಾಮಾನ್ಯರು ಇಟ್ಟಿರುವ ಹಣಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಈ ಹಿಂದೆ ಬ್ಯಾಂಕ್ ಗಳು ಒಂದು ವೇಳೆ ದಿವಾಳಿಯಾದರೆ ಒಂದು ಲಕ್ಷದವರೆಗೆ ಹಣ ಇಟ್ಟಿದ್ದವರಿಗೆ
ಸರ್ಕಾರ ಹಣವನ್ನು ನೀಡುತ್ತಿತ್ತು. ಉಳಿತಾಯದಾರರು ಆ ಹಣವನ್ನು ಪಡೆದುಕೊಳ್ಳಲು 90 ದಿನಗಳ ಒಳಗೆ ಅರ್ಹರಾಗಿರುತ್ತಿದ್ದರು ಆದರೆ DICGC ಯ ಈ ನಿಯಮದಲ್ಲಿ 2020 ರ ನಂತರ ಸ್ವಲ್ಪ
ಮಾರ್ಪಾಡು ಮಾಡಲಾಗಿದೆ. ಈಗ ಈ ಮಿತಿಯನ್ನು 5 ಲಕ್ಷದವರೆಗೆ ಹೆಚ್ಚಿಸಲಾಗಿದೆ.
ನೀವು ಠೇವಣಿ ಇಡುವ ಮೂಲಕ ಅಥವಾ ಯಾವುದಾದರೂ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 5 ಲಕ್ಷ ಹಣ ಉಳಿತಾಯ ಮಾಡಿದರೆ ಆ ಸಂದರ್ಭದಲ್ಲಿ ಒಂದು ವೇಳೆ ಆ ಬ್ಯಾಂಕ್ ದಿವಾಳಿಯಾದರೆ
5 ಲಕ್ಷದವರೆಗೆ ಹಣವನ್ನು ನೀವು ಹಿಂಪಡೆಯಲು ಅರ್ಹರಾಗಿರುತ್ತೀರಿ ಮತ್ತು ಆ ಇನ್ಶೂರೆನ್ಸ್ (Insurance) ಹಣವನ್ನು 9 ದಿನದ ಒಳಗೆ ನೀವು ಪಡೆದುಕೊಳ್ಳಲು ಸಾಧ್ಯವಿದೆ. ಆದರೆ ಇಲ್ಲಿ ನೀವು
ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ಮುಖ್ಯವಾದ ವಿಷಯ ಏನೆಂದರೆ ಒಂದು ವೇಳೆ ನೀವು 5 ಲಕ್ಷಕ್ಕಿಂತ ಹೆಚ್ಚಿಗೆ ಹಣ ಇಟ್ಟಿದ್ದರೂ ಸಹ ನೀವು ಕೇವಲ 5 ಲಕ್ಷ ಹಣವನ್ನು ಮಾತ್ರ ಪಡೆಯಲು
ಅರ್ಹರಿರುತ್ತೀರಿ ಎನ್ನುವುದನ್ನು ಎಲ್ಲರೂ ಮುಖ್ಯವಾಗಿ ತಿಳಿದುಕೊಂಡಿರಬೇಕು.
ರಶ್ಮಿತಾ ಅನೀಶ್