Dehli: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ (Sanjeev Khanna) ಅವರು, ಬಿನೊಯ್ ಬಾಬು ಅವರಿಗೆ ಜಾಮೀನು ನೀಡಿದ್ದು, “ನೀವು ಜನರನ್ನು ವಿಚಾರಣೆಯ ಮೊದಲೇ ದೀರ್ಘಕಾಲದವರೆಗೆ ಜೈಲಿನಲ್ಲಿ (Jail)ಇರಿಸಲು ಸಾಧ್ಯವಿಲ್ಲ. ಇದು ಸರಿಯಲ್ಲ. ಇದು ಹೇಗೆ ನಡೆಯುತ್ತದೆ ಎಂದು ನಮಗೆ ಇನ್ನೂ ತಿಳಿದಿಲ್ಲ. ಕೇಂದ್ರೀಯ ತನಿಖಾ ದಳದ ಆರೋಪ ಮತ್ತು ಇಡಿ ಆರೋಪಿಸುವುದರ ನಡುವೆ ವಿರೋಧಾಭಾಸವಿದೆ ಎಂದು ಹೇಳಿದ್ದಾರೆ.
ದೆಹಲಿ ಮದ್ಯ ನೀತಿ ಹಗರಣಕ್ಕೆ (Delhi liquor policy scam) ಸಂಬಂಧಿಸಿದಂತೆ ವಿಶ್ವದ ಅತಿದೊಡ್ಡ ಆಲ್ಕೊಹಾಲ್ಯುಕ್ತ ಪಾನೀಯಗಳ ಕಂಪನಿಯ ಅಂಗಸಂಸ್ಥೆಯಾದ ಪೆರ್ನೋಡ್ ರಿಕಾರ್ಡ್ ಇಂಡಿಯಾದ (Pernod Ricard India) ಹಿರಿಯ ಕಾರ್ಯನಿರ್ವಾಹಕರಾದ ಪ್ರಾದೇಶಿಕ ಜನರಲ್ ಮ್ಯಾನೇಜರ್ ಬಿನೊಯ್ ಬಾಬು (Binoy Babu) ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ನ್ಯಾಯಮೂರ್ತಿ ಎಸ್ವಿಎನ್ ಭಟ್ (SVN Bhat) ಅವರನ್ನೊಳಗೊಂಡ ಪೀಠವು, ಬಾಬು ಅವರು ಈಗಾಗಲೇ 13 ತಿಂಗಳ ಕಾಲ ಜೈಲಿನಲ್ಲಿದ್ದರು. ಅವರ ಅರ್ಜಿಯಲ್ಲಿ ಎತ್ತಿದ ವಾಸ್ತವಿಕ ಸನ್ನಿವೇಶಗಳ ಆಧಾರದ ಮೇಲೆ ಅವರಿಗೆ ಜಾಮೀನು ನೀಡಲಾಗುವುದು ಎಂದಿದ್ದಾರೆ. ಈ ಪ್ರಕರಣದಲ್ಲಿ ಹಲವಾರು ಜನರನ್ನು ಬಂಧಿಸಲಾಗಿದ್ದು, ಇದು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ, ವಿಶೇಷವಾಗಿ ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ (Am Admi) ಪಕ್ಷದ ನಡುವೆ ಭಾರೀ ರಾಜಕೀಯ ಗದ್ದಲವನ್ನು ಉಂಟುಮಾಡಿದೆ.
ದೆಹಲಿಯ (Delhi) ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಇಬ್ಬರು ಹಿರಿಯ ಎಎಪಿ ಸದಸ್ಯರನ್ನೂ ಬಂಧಿಸಲಾಗಿದೆ. ಸಿಸೋಡಿಯಾ ಫೆಬ್ರವರಿಯಿಂದ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅಕ್ಟೋಬರ್ನಿಂದ ಜೈಲಿನಲ್ಲಿದ್ದಾರೆ. ಅಕ್ಟೋಬರ್ 30 ರಂದು ಸುಪ್ರೀಂಕೋರ್ಟ್ (Supreme Court) ಮನೀಶ್ ಸಿಸೋಡಿಯಾ ಜಾಮೀನು ನಿರಾಕರಿಸಿತ್ತು. ಸಗಟು ಮದ್ಯ ಮಾರಾಟಗಾರರಿಗೆ ₹ 338 ಕೋಟಿಯ ಗಳಿಕೆಗೆ ಅನುಕೂಲ ಮಾಡಿಕೊಟ್ಟ ಆರೋಪಗಳು “ತಾತ್ಕಾಲಿಕವಾಗಿ” ಸಾಕ್ಷ್ಯಾಧಾರಗಳಿಂದ ಬೆಂಬಲಿತವಾಗಿದೆ ಎಂದು ಹೇಳಿದ್ದು, ಸಿಸೋಡಿಯಾ ಕಳೆದ ವಾರ ತನ್ನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಸಿಬಿಐ (CBI) ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಮೊದಲು ಬಂಧಿಸಿತು. ದೆಹಲಿಯ ತಿಹಾರ್ ಜೈಲಿನಲ್ಲಿ (Tihar Jail) ಸುದೀರ್ಘ ವಿಚಾರಣೆಯ ನಂತರ ಎರಡು ವಾರಗಳ ನಂತರ ಮಾರ್ಚ್ (March 9) ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತು. ದೆಹಲಿ ಸರ್ಕಾರವು ಪರಿಷ್ಕೃತ ಮದ್ಯದ ಅಬಕಾರಿ ನೀತಿಯನ್ನು ನವೆಂಬರ್ 17, 2021 ರಂದು ಜಾರಿಗೆ ತಂದಿದ್ದರೂ ಭ್ರಷ್ಟಾಚಾರದ ವ್ಯಾಪಕ ಆರೋಪಗಳ ನಡುವೆ ಒಂದು ವರ್ಷದ ನಂತರ ಅದನ್ನು ರದ್ದುಗೊಳಿಸಲಾಯಿತು.
ತನಿಖಾ ಸಂಸ್ಥೆಗಳು ಸಗಟು ವ್ಯಾಪಾರಿಗಳ ಲಾಭಾಂಶವನ್ನು ನಿರಂಕುಶವಾಗಿ ಐದರಿಂದ 12 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿವೆ.
ಹೊಸ ನೀತಿಯು ಮದ್ಯದ ಪರವಾನಗಿಗಳಿಗೆ ಅನರ್ಹರು ವಿತ್ತೀಯ ಪ್ರಯೋಜನಗಳಿಗೆ ಒಲವು ತೋರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ದೆಹಲಿ ಸರ್ಕಾರ ಮತ್ತು ಮನೀಶ್ ಸಿಸೋಡಿಯಾ (Manish Sisodia) ಯಾವುದೇ ತಪ್ಪು ಮಾಡಿಲ್ಲ ಎಂದು ನಿರಾಕರಿಸಿದ್ದು ಹೊಸ ನೀತಿಯು ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಭವ್ಯಶ್ರೀ ಆರ್ ಜೆ