ಯಡಿಯೂರಪ್ಪ ಮೊಮ್ಮಗಳ ಸಾವಿಗೆ ಖಿನ್ನತೆಯೇ ಕಾರಣ

soundarya

ಬೆಂಗಳೂರು ಜ 29 : ಯೂಡಿಯೂರಪ್ಪನವರ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಖಿನ್ನತೆಯೇ ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿದ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ, ಸೌಂದರ್ಯ ಪ್ರಸವಾನಂತರದ ಖಿನ್ನತೆಯೊಂದಿಗೆ ಹೋರಾಡುತ್ತಿದ್ದರು. ಈ ವಿಷಯ ಅವರ ಕುಟುಂಬಕ್ಕೂ ತಿಳಿದಿತ್ತು. ಆಕೆ ಮಗು ಹುಟ್ಟಿದ ನಂತರ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ವಿಷಯ ನಮಗೆಲ್ಲರಿಗೂ ಗೊತ್ತಿತ್ತು. ಆಕೆ ಖುಷಿಯಾಗಿರಲೆಂದು ಕೆಲವೊಮ್ಮೆ ಯಡಿಯೂರಪ್ಪನವರೇ ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಇರಿಸಿಕೊಳ್ಳುತ್ತಿದ್ದರು. ಆಕೆಯನ್ನು ಎಷ್ಟೇ ಖುಷಿಯಾಗಿಟ್ಟುಕೊಳ್ಳಲು ನೋಡಿದರೂ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ. ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಸೌಂದರ್ಯ ಅವರ ಮೃತದೇಹದ ಕುತ್ತಿಗೆಯ ಭಾಗದಲ್ಲಿ ಮಾರ್ಕ್ ಇದೆ, ಬೇರೆ ಎಲ್ಲೂ ಮಾರ್ಕ್  ಇಲ್ಲ  ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಾದ ಡಾ. ಶತೀಶ್ ಹೇಳಿಕೆ ನೀಡಿದ್ದಾರೆ. ಮರಣೋತ್ತರ ವರದಿ ಸಿದ್ದವಾಗಿದೆ. ಅಧಿಕಾರಿಗಳಿಗೆ ವರದಿಯನ್ನು ಹಸ್ತಾಂತರಿಸುತ್ತೇವೆ ಎಂದು ಸತೀಶ್ ತಿಳಿಸಿದ್ದರು

ಬೆಂಗಳೂರಿನ ವಸಂತನಗರದ ಫ್ಲ್ಯಾಟ್ ನಲ್ಲಿ ತಮ್ಮ ಮನೆಯ ರೂಮಿನಲ್ಲಿಯೇ ಸೌಂದರ್ಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. 2018ರಲ್ಲಿ ಡಾ. ನೀರಜ್ ಜತೆ ವಿವಾಹವಾಗಿದ್ದ ಸೌಂದರ್ಯ ಅವರಿಗೆ ಪುಟ್ಟ ಮಗು ಕೂಡ ಇತ್ತು. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು.

Exit mobile version