ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ವಿರುದ್ಧ ಎಫ್​ಐಆರ್​ ದಾಖಲಿಸಿದ ಅಸ್ಸಾಂ ಪೊಲೀಸ್

Assam: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ @rahulgandhi ನೇತೃತ್ವದಲ್ಲಿ ಜರುಗುತ್ತಿರುವ ಭಾರತ್ ಜೋಡೋ (FIR Against Rahul Gandhi) ನ್ಯಾಯ ಯಾತ್ರೆ ವಿರುದ್ಧ ಅಸ್ಸಾಂ ಪೊಲೀಸರು

ಎಫ್‌ಐಆರ್ ದಾಖಲಿಸಿದ್ದು, ಅನುಮತಿಯಂತೆ ಯಾತ್ರೆ ಕೆಬಿ ರಸ್ತೆಯತ್ತ ಸಾಗಬೇಕಿತ್ತು ಆದರೆ ಯಾತ್ರೆಯ ಮಾರ್ಗ ಬದಲಾಸಿದ್ದಕ್ಕಾಗಿ ರಾಜ್ಯದ ಜೋರ್ಹತ್ ನಗರದಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ

ಎಂದು ಅಧಿಕಾರಿಯೊಬ್ಬರು (FIR Against Rahul Gandhi) ತಿಳಿಸಿದ್ದಾರೆ.

ನಗರದಲ್ಲಿ ಬದಲಾಗಿ ಬೇರೆ ಮಾರ್ಗದಲ್ಲಿ ಯಾತ್ರೆ ಕೈಗೊಳ್ಳಲಾಯಿತು. ಇದರಿಂದ ಆ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜನರ ಏಕಾಏಕಿ ನುಗ್ಗಿದ್ದರಿಂದ ಕೆಲವರು ಬಿದ್ದು

ನೂಕುನುಗ್ಗಲು ಉಂಟಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾತ್ರೆ ಮತ್ತು ಅದರ ಮುಖ್ಯ ಆಯೋಜಕರ ವಿರುದ್ಧ ಜೋರ್ಹತ್ ಸದರ್ (Jorhat Sadar) ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ

ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಯಾತ್ರೆಯು ಜಿಲ್ಲಾಡಳಿತದ ನಿಯಮಗಳನ್ನು ಅನುಸರಿಸಿಲ್ಲ ಎಂದು ಅಧಿಕಾರಿಯ ಪ್ರಕಾರ, ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು, ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬುದು

ಪ್ರಮುಖ ಅಂಶವಾಗಿದೆ. ಎಫ್‌ಐಆರ್‌ಗೆ ಸಂಬಂಧಿಸಿದಂತೆ ಹಿಮಂತ ಶರ್ಮಾ (Himanta Sharma) ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಎಫ್‌ಐಆರ್ ಅನಗತ್ಯ ಅಡೆತಡೆಗಳನ್ನು

ಸೃಷ್ಟಿಸುವ ತಂತ್ರವಾಗಿದೆ ಎಂದು ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಪಿಟಿಐಗೆ ತಿಳಿಸಿದ್ದಾರೆ.

ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಈ ಹಿಂದೆ ಮಾರ್ಗದ ಬಗ್ಗೆ ಎಚ್ಚರಿಕೆ ನೀಡಿದ್ದರು. ನಾವು ನಗರಗಳ ಒಳಗೆ ಹೋಗಬಾರದು ಎಂದು ಹೇಳಿದ್ದೇವೆ. ವೈದ್ಯಕೀಯ

ಕಾಲೇಜು ಮತ್ತು ನರ್ಸಿಂಗ್ ಹೋಂ ಇದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪರ್ಯಾಯ ಮಾರ್ಗವನ್ನು ಹುಡುಕಿದರೂ ಅದಕ್ಕೆ ಅವಕಾಶ ನೀಡಲಾಗುವುದು ಆದರೆ ನಗರದ ಒಳಗಿನಿಂದ

ಹೋಗಬೇಕೆಂದು ಒತ್ತಾಯಿಸಿದರೆ ನಾವು ಪೊಲೀಸ್ ಭದ್ರತೆ ನೀಡಲು ಸಾಧ್ಯವಾಗುವುದಿಲ್ಲ ಎಂದಿದ್ದರು.

ಭಾರತ್ ಜೋಡೋ ನ್ಯಾಯ ಯಾತ್ರೆಯು #BharathJodoNyayYatra, ನಾಗಾಲ್ಯಾಂಡ್ ನಂತರ ಅಸ್ಸಾಂ ತಲುಪಿದ್ದು, ಈ ಸಂದರ್ಭದಲ್ಲಿ, ಕಾಂಗ್ರೆಸ್ (Congress) ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ

ಶಿವಸಾಗರ ಜಿಲ್ಲೆಯಲ್ಲಿ ಮಾತನಾಡಿ ಬಹುಶಃ ಈ ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಮತ್ತು ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಇದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ತಮ್ಮ ಖಾತೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ಅಸ್ಸಾಂ ತಲುಪಿದ ನಂತರ, ಮಣಿಪುರ ಮತ್ತು ನಾಗಾಲ್ಯಾಂಡ್‌ನ (Manipura and Nagaland) ಜನರಿಂದ ಭಾರು ಪ್ರೀತಿ ನನಗೆ

ಸಿಕ್ಕಿತು. ನಿಮ್ಮ ನೋವು, ನಿಮ್ಮ ಸಮಸ್ಯೆಗಳು ಮತ್ತು ನಿಮಗೆ ಆಗುತ್ತಿರುವ ಭೀಕರ ಅನ್ಯಾಯವನ್ನು ನಿಕಟವಾಗಿ ಅರ್ಥಮಾಡಿಕೊಳ್ಳುವುದು ನಮ್ಮ ಭೇಟಿಯ ಉದ್ದೇಶವಾಗಿದೆ ಎಂದು ಬರೆದಿದ್ದಾರೆ.

ಅಸ್ಸಾಂ ಸರ್ಕಾರವು ಬಿಜೆಪಿಯ (BJP) ರೂಪದಲ್ಲಿ ದ್ವೇಷದ ಗೊಬ್ಬರದಿಂದ ಹುಟ್ಟಿರುವ ಭ್ರಷ್ಟಾಚಾರದ ಬೆಳೆಯಾಗಿದೆ. ಅಸ್ಸಾಂನ ಮುಖ್ಯಮಂತ್ರಿ ಭಾರತದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದು,

ಸಾರ್ವಜನಿಕ ಹಣವನ್ನು ಲೂಟಿ ಮಾಡುವುದೊಂದೇ ಇವರ ಕೆಲಸವಾಗಿದೆ. ಹಣದ ಬಲವು ಅಸ್ಸಾಂನ ಜನರ ಶಕ್ತಿಯನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ನಾವು ಈ ಅನ್ಯಾಯದ ವಿರುದ್ಧ ಹೋರಾಡಬೇಕು

ಎಂದು ಬರೆದುಕೊಂಡಿದ್ದಾರೆ.

Exit mobile version