Hassan: ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ (flowers destroyed due to Drought) ಬರ ಘೋಷಣೆಯಾಗಿದ್ದರೂ ಹೂವಿನ ಬೆಳೆಗೆ ಪರಿಹಾರ ಸಿಗದ ಕಾರಣ 100-200 ರ ವರೆಗೂ
ಮಾರಾಟ ಆಗುತ್ತಿದ್ದ ಸೇವಂತಿಗೆ ಹೂವು ಈಗ ಕೇವಲ ಒಂದು ಮಾರು 10 ರೂ ನಿಂದ 20 ರೂ ತನಕ ಮಾರಾಟ ಆಗುತ್ತಿದೆ. ಕಷ್ಟಪಟ್ಟು ಬೆಳೆದಿದ್ದ ಸೇವಂತಿಗೆ ಹೂ ಬೆಳೆ ರೈತನ ಜೇಬು
ತುಂಬಿಸುವ ಬದಲು ಕೈಸುಟ್ಟುಕೊಳ್ಳುವಂತೆ ಆಗಿದ್ದು, ತೀವ್ರ ಬೆಲೆ ಕುಸಿತದಿಂದ ನಷ್ಟಕ್ಕೆ ಒಳಗಾಗಿರುವ ರೈತ, ಟ್ರಾಕ್ಟರ್ (Tractor) ಹರಿಸಿ ಫಸಲು ನಾಶ ಪಡಿಸಿದ್ದಾನೆ.
ಕೇವಲ 10 ರೂ.ನಿಂದ 20 ರೂ. ತನಕ ಮಾರಾಟವಾಗುತ್ತಿದೆ ಎಂದು ತಾಲೂಕಿನ ಕಸಬಾ, ರಾಮನಾಥಪುರ,ದೊಡ್ಡಮಗ್ಗೆ ,ಕೊಣನೂರು ಹಾಗೂ ಕೇರಳಾಪುರ ಹೋಬಳಿಗಳ ವ್ಯಾಪ್ತಿಯಲ್ಲಿ ರೈತರು 150 ಹೆಕ್ಟೇರ್
(Hectares) ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಚೆಂಡು ಹೂವು ಸೇವಂತಿಗೆ, ಬೆಳೆದಿದ್ದ ಈ ಹಂತದಲ್ಲಿ ಪರ್ಯಾಯವಾಗಿ ಲಾಭದ ಬದಲು ನಷ್ಟವಾಗಿದೆ ಎಂದು ರೈತರು ಗೋಳಾಡುವಂತಾಗಿದೆ.
ಈ ಬಾರಿ ದೂರದ ಕೇರಳ ರಾಜ್ಯ, ಮಡಿಕೇರಿ (Madikeri) , ಮಂಗಳೂರು, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಸೇವಂತಿಗೆ ಬೆಳೆದಿದ್ದರು ಮತ್ತು ಬೆಂಗಳೂರು (Bengaluru) ನಗರಗಳಿಗೆ ಹೂವನ್ನು
ಸಾಗಿಸಿ ಬೆಳೆಗಾರರು ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಹೂವನ್ನು ಕೇಳುವವರೇ ಇಲ್ಲಎಂಬಂತಾಗಿದೆ ಎಂದು ದುಃಖದ ಮಾತುಗಳನ್ನಾಡಿದ್ದಾರೆ.
ಒಂದು ಎಕರೆ ಪ್ರದೇಶದಲ್ಲಿ ಹೂ ಬೆಳೆ ಕೈಗೊಳ್ಳಲು ಕನಿಷ್ಠ 30 ಸಾವಿರ ರೂ. ವೆಚ್ಚವಾಗುತ್ತದೆ.ಆದರೆ ದರ ಕುಸಿತದಿಂದ ಹೂ ಕಿತ್ತು ಮಾಲೆ ಕಟ್ಟಲು ತಗಲುತ್ತಿರುವ ಕೂಲಿ ವೆಚ್ಚವೂ ಸಿಗುತ್ತಿಲ್ಲ. ಒಬ್ಬರಿಗೆ
ಒಂದು ಸಾವಿರ ರೂಪಾಯಿ.ಕೂಲಿ ಕೊಡಬೇಕಾಗಿದ್ದ ಹೂವಿನ ದರಕ್ಕಿಂತ ಕೂಲಿ ದರವೇ ಅಧಿಕವಾಗುತ್ತಿರುವ ಇದರ ಪರಿಣಾಮ ರೈತರು ಫಸಲು ಇರುವ ಹಂತದಲ್ಲಿಯೇ ಬೆಳೆಯನ್ನು ಟ್ರ್ಯಾಕ್ಟರ್
ಮೂಲಕ (flowers destroyed due to Drought) ನಾಶಗೊಳಿಸುತ್ತಿದ್ದಾರೆ.
ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದ ರೈತ ಚಂದ್ರಶೇಖರ್ (Chandrashekar) ಅವರು ಹೂ ವಿಗೆ ಸರಿಯಾದ ಬೆಲೆ ಇಲ್ಲದ ಕಾರಣ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೇವಂತಿಗೆ ಗಿಡಗಳನ್ನು
ಹೂ ಸಮೇತ ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡಿ ನಾಶಪಡಿಸಿದ್ದಾರೆ. ಈ ಹಿಂದೆಯ ಯಾವುದೇ ಹೂ ಬೆಳೆ ಪರಿಹಾರ ದೊರೆತಿಲ್ಲ.
ಬರ ಘೋಷಣೆಯಾದರು ಪರಿಹಾರ ಸಿಕ್ಕಿಲ, ಹಾಗಾಗಿ ರೈತರು ಹೂ ಬೆಳೆಯನ್ನು ನಾಶಗೊಳಿಸಿ ಪರ್ಯಾಯ ಬೆಳೆಯತ್ತ ಮುಂದಾಗುತ್ತಿದ್ದಾರೆ. ಉತ್ತಮ ಲಾಭ ಗಳಿಸುವ ನಿರೀಕ್ಷೆಯಿಂದ ಅಪಾರ ಶ್ರಮ ವಹಿಸಿ
ಬೆಳೆದಿದ್ದ ಬೆಳೆ ನಮ್ಮ ಕುಟುಂಬವನ್ನು ಸಾಲದ ಶೂಲಕ್ಕೆ ತಳ್ಳಿತು ಎಂದು ಹೂ ಬೆಳೆಗಾರರು ಅಳಲುತೊಕೊಂಡಿದ್ದಾರೆ.
ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಅರಕಲಗೂಡು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ “ರಾಜೇಶ್”(Rajesh) ಈ ತಾಲೂಕಿನ ಹಲವು
ಗ್ರಾಮಗಳಲ್ಲಿ ಹೂ ಕೃಷಿಯನ್ನೇ ರೈತರು ಪ್ರಮುಖ ವಾಣಿಜ್ಯ ಬೆಳೆಯಾಗಿ ಕೈಗೊಂಡಿದ್ದಾರೆ ಈ ಬಾರಿ ಬೆಲೆ ಇಲ್ಲ ಮುಂಬರುವ ನಾಡ ಹಬ್ಬ ದಸರಾ ಸೇರಿದಂತೆ ಇತರೆ ಹಬ್ಬಗಳಿಗೆ ಹೂ ಬೆಲೆ ಅಧಿಕಗೊಳ್ಳುವ
ನಿರೀಕ್ಷೆಯಿದೆ,ಪರ್ಯಾಯ ಬೆಳೆಯತ್ತ ರೈತರು ಆಲೋಚನೆ ಮಾಡಿ ಬೆಳೆ ನಾಶಕ್ಕೆ ಮುಂದಾಬೇಡಿ ಎಂದು ತಿಳಿಸಿದ್ದಾರೆ ಹೇಳಿದ್ದಾರೆ.
ಗಿಡಗಳಲ್ಲಿ ಹೂ ಕೊಯ್ದು ಮಾಲೆ ಕಟ್ಟಲು ತಗಲುತ್ತಿರುವ ಕೂಲಿ ವೆಚ್ಚವೂ ಸಿಗುತ್ತಿಲ್ಲ ಸೇವಂತಿ ಹೂ ಒಂದು ಮಾರಿಗೆ 5ರಿಂದ 10 ರುಪಾಯಿಗೆ ಮಾರಾಟ ಮಾಡಬೇಕಾಗಿದೆ. ಎಂದು ಮನ ನೊಂದ ರೈತ ಹೂ
ಬೆಳೆಯನ್ನು ಟ್ರ್ಯಾಲಿ ಹೊಡೆಸಿ ನಾಶಪಡಿಸಿ ಸರಕಾರ ಹೂವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಬೆಳೆಗಾರ ಚಂದ್ರಶೇಖರ್, ಹೇಳಿದ್ದಾರೆ
ಇದನ್ನು ಓದಿ: 20 ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ಭಾರೀ ಇಳಿಕೆ: 9 ಜಿಲ್ಲೆಗಳಲ್ಲಿ ಸಾಧಾರಣ ಕುಸಿತ ದಾಖಲು
- ಮೇಘಾ ಮನೋಹರ ಕಂಪು