ಕರ್ತವ್ಯನಿರತ ಗರ್ಭಿಣಿ ಅರಣ್ಯ ರಕ್ಷಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಮಾಜಿ ಸರಪಂಚ್.!

sindu sanap

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಲಾಸವಾಡೆ ಗ್ರಾಮದಲ್ಲಿ ಕರ್ತವ್ಯ ನಿರತ ಮಹಿಳಾ ಅರಣ್ಯ ಸಂರಕ್ಷಣಾಧಿಕಾರಿ ಸಿಂಧು ಸನಪ್ ಅವರನ್ನು ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆ ನಡೆದಿರುವುದು ತೀರ ಶೋಚನೀಯವಾಗಿದೆ.

ಈ ಆಘಾತಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಲಾಸವಾಡೆ ಗ್ರಾಮದಲ್ಲಿ ಕರ್ತವ್ಯ ನಿರತ ಮಹಿಳಾ ಅರಣ್ಯ ರಕ್ಷಕರಾಗಿರುವ ಸಿಂಧು ಸನಪ್ ಅವರನ್ನು ಅಮಾನುಷವಾಗಿ ಥಳಿಸಲಾಗಿದೆ. 24 ವರ್ಷದ ಸಿಂಧು ಸನಪ್ ಅವರು ಭ್ರಷ್ಟಾಚಾರಕ್ಕೆ ಮಣಿಯಲಿಲ್ಲ ಎಂಬ ಕಾರಣಕ್ಕೆ ಗ್ರಾಮದ ಮಾಜಿ ಮುಖ್ಯಸ್ಥನಾಗಿದ್ದ ಮತ್ತು ಅರಣ್ಯ ಸಮಿತಿಯ ಅಧ್ಯಕ್ಷನಾಗಿದ್ದ ರಾಮಚಂದ್ರ ಜಾಂಕರ್, ಬುಧವಾರ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಆಕೆಯ ಪತಿಗೆ ಕಾಲಿನಲ್ಲಿ ಒದ್ದು ಹಿಗ್ಗುಮುಗ್ಗಾ ಹೊಡೆದಿದ್ದಾರೆ. ಸಿಂಧು ಸನಪ್ ನಾಲ್ಕು ತಿಂಗಳ ಗರ್ಭಿಣಿ ಎಂಬುದು ವರದಿಯಲ್ಲಿ ತಿಳಿದುಬಂದಿದೆ. ಸಿಂಧು ಮತ್ತು ರೇಂಜರ್ ಆಗಿರುವ ಆಕೆಯ ಪತಿ ಸೂರ್ಯಾಜಿ ಥಾಂಬ್ರೆ ಅವರನ್ನು ಥಳಿಸಿದಾಗ ಜಂಕರ್ ಅವರ ಪತ್ನಿ ಪ್ರತಿಭಾ ಜೊತೆಗಿದ್ದರು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಪ್ರವೀಣ್ ಅಂಗುಸಾಮಿ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಅನಾಗರಿಕ ಕೃತ್ಯದ ಆರೋಪಿಗಳ ವಿರುದ್ಧ ಕಟ್ಟುನಿಟ್ಟಾದ ಮತ್ತು ತಕ್ಷಣದ ಕ್ರಮಕ್ಕೆ ಕರೆ ನೀಡಿದ್ದಾರೆ. ಜಂಕರ್‌ಗಳು ರೇಂಜರ್ ದಂಪತಿಗಳ ಮೇಲೆ ಬೈದಿರುವ ಬೈಗುಳಗಳನ್ನು ಮತ್ತು ಚಪ್ಪಲಿಯಿಂದ ಥಳಿಸಿರುವುದನ್ನು ತೀವ್ರ ಖಂಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಿಂಸಾತ್ಮಕ, ಕ್ರೂರ ಉದ್ಧಟತನಕ್ಕೆ ವಿವರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಜಂಕರ್ ಜೋಡಿಯ ವಿರುದ್ಧ ಸತಾರಾ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದಂಪತಿಗಳ ವಿರುದ್ಧದ ಆರೋಪಗಳು ಸರಿಯಾಗು ಇನ್ನೂ ತಿಳಿದುಬಂದಿಲ್ಲವಾದರೂ, ಎರಡು ಪೊಲೀಸ್ ಅಧಿಕಾರಿಗಳ ತಂಡಗಳು ದುಷ್ಕರ್ಮಿಗಳನ್ನು  ಬಂಧಿಸಿದ್ದಾರೆ. ಮಹಾರಾಷ್ಟ್ರದ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು ಘಟನೆಯನ್ನು ಟ್ವಿಟ್ಟರ್‌ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಕಾನೂನನ್ನು ಕಠಿಣವಾಗಿ ಎದುರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅರಣ್ಯ ಸಂರಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಸುಹಾಸ ಭೋಸಲೆ ಅವರು ಈ ಕೃತ್ಯವನ್ನು ಖಂಡಿಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version