New Delhi : ಪತ್ರಕರ್ತೆ ಗೌರಿ ಲಂಕೇಶ್ (Gauri Lankesh) ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಕರ್ನಾಟಕ ಸರ್ಕಾರ ಪ್ರಶ್ನಿಸಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ (Supreme Court) ವಿಚಾರಣೆ ಕೈಗೆತ್ತಿಕೊಂಡು ಪ್ರತಿಕ್ರಿಯೆ ಕೋರಿ ಆರೋಪಿಗೆ ನೋಟಿಸ್ ಜಾರಿ ಮಾಡಿದೆ. ಈ ಹಿಂದೆ ಕೂಡ ಇದೇ ರೀತಿ ನೋಟಿಸ್ (Notice) ನೀಡಲಾಗಿತ್ತು.
ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪರವಾಗಿ ವಕೀಲ ವಿ ಎನ್ ರಘುಪತಿ (V N Raghupati) ಸಲ್ಲಿಸಿದ ಮನವಿಯ ಮೇರೆಗೆ ಆರೋಪಿಗಳಿಂದ ಪ್ರತಿಕ್ರಿಯೆ ಪಡೆಯುವಂತೆ ನ್ಯಾಯಾಧೀಶರಾದ ವಿಕ್ರಮ್ ನಾಥ್ ಹಾಗೂ ಚಂದ್ರ ಶರ್ಮಾ (Chandra Sharma) ನೇತೃತ್ವದ ಪೀಠವು ನಿರ್ದೇಶನ ನೀಡಿದೆ. ಅದರಂತೆ ಆರೋಪಿಯ ಹೇಳಿಕೆಯನ್ನು ಸಂಗ್ರಹಿಸುವಂತೆ ಸೂಚನೆ ನೀಡಿದೆ.
ಪ್ರಕರಣದಲ್ಲಿ ದೂರುದಾರರಾದ ಕವಿತಾ ಪರ ವಕೀಲೆ ಅಪರ್ಣ ಭಟ್ (Aparna Bhat) ನ್ಯಾಯಾಲಕ್ಕೆ ಹಾಜರಾಗಿದ್ದರು. ಎರಡು ಅರ್ಜಿಗಳನ್ನು ಸೇರಿಸಿ ಆದೇಶಿಸಿರುವ ನ್ಯಾಯಾಲಯವು ಏಪ್ರಿಲ್ (April) 9 ರಂದು ವಿಚಾರಣೆ ಕೈಗೊಳ್ಳಲು ನಿರ್ಧರಿಸಿದೆ. ಇನ್ನು ಆರೋಪಿ ಮೋಹನ್ ನಾಯಕ್ಗೆ ಕರ್ನಾಟಕ ಹೈಕೋರ್ಟ್ ಡಿಸೆಂಬರ್ (December) 7 ರಂದು ಜಾಮೀನು ಮಂಜೂರು ಮಾಡಿತ್ತು.ಮುಂಚೂಣಿ ಪತ್ರಕರ್ತೆ ಹಾಗೂ ಚಳುವಳಿಗಾರರಾಗಿದ್ದ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ (Rajarajeshwari Nagar) ಅವರ ಮನೆಯ ಎದುರು ಸೆಪ್ಟೆಂಬರ್ 5, 2017ರಂದು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ಆರೋಪಿಯು ಐದು ವರ್ಷಗಳಿಗೂ ಹೆಚ್ಚು ಕಾಲ ಸೆರೆಮನೆ ವಾಸದಲ್ಲಿದ್ದು, ವಿಚಾರಣೆಯಲ್ಲಿ ಅನಗತ್ಯ ವಿಳಂಬ ಉಂಟಾದಾಗ ಜಾಮೀನನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ (Highcourt) ಹೇಳಿತ್ತು. ಗಂಭೀರ ಆರೋಪಗಳಿರುವ ಕೋಕಾ ಕಾಯ್ದೆಯಡಿ ಬಂಧಿತನಾಗಿರುವ ಆರೋಪಿ ಮೋಹನ್ ನಾಯಕ್ ಎನ್ (Mohan Nayak N) ಎಂಬಾತನ ಆರೋಪಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಏಪ್ರಿಲ್ 22, 2021 ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ (October) 21, 2021ರಂದು ತಳ್ಳಿಹಾಕಿತ್ತು.
ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಅಮೋಲ್ ಕಾಳೆಯೊಂದಿಗೆ ಆರೋಪಿ ಮೋಹನ್ ನಾಯಕ್ (Mohan Nayak) ಕೂಡ ಆತನ ಜೊತೆ ಹಲವು ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿದ್ದ ಹಾಗಾಗಿ ಜಾಮೀನು ನೀಡಿರುವ ಕುರಿತು ಪ್ರಶ್ನಿಸಿ ಆರೋಪಿಗೆ ನೊಟೀಸ್ ಜಾರಿ ಮಾಡಿದೆ.