ಮದುವೆಯಾಗುವ ವಯಸ್ಸು ಬಂದಿದ್ದರು ಮದುವೆ ಮಾಡುತ್ತಿಲ್ಲ: ಕುಡಿದ ಅಮಲಿನಲ್ಲಿ ಟವರ್ ಏರಿ ಕುಳಿತ ಯುವಕ

ವಿಜಯನಗರ,ಜೂ.14:ಹುಡುಗಿ ನನ್ನನ್ನು ಮದುವೆಯಾಗಲು ಒಪ್ಪಿದ್ದಾಳೆ ಆದರೆ ಮದುವೆಮಾಡುವುದಕ್ಕೆ ಕುಟುಂಬಸ್ಥರು ತಡಮಾಡುತ್ತಿರುವ ಕಾರಣ ಯುವಕ ಚಿರಂಜೀವಿ (೨೩) ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಕುಳಿತ್ತಿದ್ದಾನೆ. ವಿಜಯನಗರ ಜಿಲ್ಲೆಯ ಹೋಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಈಗಾಗಲೇ ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಪೋಷಕರು ಮಾತುಕತೆ ಮಾಡಿ ಮುಗಿಸಿದ್ದಾರೆ. ಪೊಷಕರಿಗೆ ಇಬ್ಬರು ಗಂಡು ಮಕ್ಕಳು ಇರೋ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುಗನ ಮದುವೆ ಆಗಲಿ ಎಂದು ಪೋಷಕರು ಚಿರಂಜೀವಿ ಮದುವೆ ಮಾಡುವುದನ್ನು ತಡಮಾಡಿದ್ದಾರೆ
ಆದರೆ, ಪೋಷಕರ ಮಾತನ್ನು ಕೇಳದ ಚಿರಂಜೀವಿ, ನನಗೆ ಹುಡುಗಿ ಫಿಕ್ಸ್ ಮಾಡಿ ಮದುವೆ ಮಡುತ್ತಿಲ್ಲ ನನಗೆ ಮದುವೆ ಮಾಡಿ ಎಂದು ಹಠದಿಂದ ಟವರ್ ಏರುವ ದುಃಸ್ಸಾಹಸಕ್ಕೆ ಕೈಹಾಕಿದ್ದಾನೆ.

Exit mobile version