ಗೋಹತ್ಯೆ, ಗೋಮಾಂಸ ಮಾರಾಟ ಕ್ರಿಮಿನಲ್ ಅಪರಾಧ

ಬೆಂಗಳೂರು, ಡಿ. 10: ವಿಧಾನಸಭೆ ಅಧಿವೇಶನದಲ್ಲಿ ಭಾರೀ ವಿರೋಧದ ನಡುವೆಯೂ ಗೋ ಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಇದರಿಂದ ಹಲವರ ಬಹುದಿನಗಳ ಬೇಡಿಕೆ ಇಡೇರಿದಂತಾಗಿದೆ.

ಗೋ ಹತ್ಯೆ ನೀಷೇಧ ವಿಧೇಯಕವನ್ನು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್‌ ಅವರು ಸದನದಲ್ಲಿ ಮಂಡಿಸಿದರು. ಇದನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮತಕ್ಕೆ ಹಾಕಿದ್ದರು. ವಧೇಯಕ ಮಂಡನೆಗೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿವೆ. ಸದನದ ಬಾವಿಗೆ ಇಳಿದು, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ವಿರೋಧದ ಮಧ್ಯೆಯೂ ಗೋಹತ್ಯೆ ನಿಷೇಧ ಬಿಲ್‌ಗೆ ಅಂಗೀಕಾರ ಸಿಕ್ಕಿದೆ.

ಗೋ ಹತ್ಯೆ, ಗೋಮಾಂಸ ಮಾರಾಟ ಕ್ರಿಮಿನಲ್‌ ಅಪರಾಧ, ಗೋಹತ್ಯೆ ಮಾಡಿದರೆ ಕನಿಷ್ಠ ೩ ವರ್ಷ ಹಾಗೂ, ಗರಿಷ್ಠ 5 ವರ್ಷ ಜೈಲು. ಅದಲ್ಲದೇ ಕನಿಷ್ಠ 50,000 ರೂ. ನಿಂದ ಗರಿಷ್ಠ 5 ಲಕ್ಷ ದಂಡ. ೨ನೇ ಅಥವಾ ಅದಕ್ಕಿಂತ ಹೆಚ್ಚು ಬಾರಿ ಈ ಅಪರಾಧ ಮಾಡಿದರೆ ಕನಿಷ್ಠ 1 ಲಕ್ಷ, ಗರಿಷ್ಠ 10 ಲಕ್ಷ ರೂ. ದಂಡ, 7 ವರ್ಷಗಳವರೆಗೆ ಜೈಲು. ಹೊರರಾಜ್ಯಕ್ಕೆ ಗೋ ಸಾಗಣೆ ನಿಷಿದ್ಧ, ರಾಜ್ಯದೊಳಗೆ ಕೃಷಿ, ಹೈನುಗಾರಿಕೆ ಉದ್ದೇಶ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಸಾಗಣೆ ನಿಷಿದ್ಧ. ಇನ್ನು 13 ವರ್ಷ ವಯಸ್ಸಿನ ಮೇಲ್ಪಟ್ಟ ಎಮ್ಮೆಗಳ ಹತ್ಯೆಗೆ ಷರತ್ತುಬದ್ಧ ಒಪ್ಪಿಗೆ ಇದೆ. ಸಂಬಂಧಿಸಿದ ಸಂಸ್ಥೆಗಳ ಅನುಮತಿ ಕಡ್ಡಾಯ.

Exit mobile version