ಗ್ರಾಪಂ ಅವಿರೋಧ ಸಂಭ್ರಮ ಮಧ್ಯೆ ಪತಿ ಆತ್ಮಹತ್ಯೆ!

ಚಾಮರಾಜನಗರ, ಡಿ. 16: ಎರಡು ದಿನಗಳ ಹಿಂದೆ ಯಷ್ಟೇ ಗ್ರಾಮಪಂಚಾಯ್ತಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ದೊಡ್ಡರಾಯಪೇಟೆಯಲ್ಲಿ ನಡೆದಿದೆ.

ನಿಂಗರಾಜು(27) ಆತ್ಮಹತ್ಯೆಮಾಡಿ ಕೊಂಡವರು. ಮೃತರ ಪತ್ನಿ ಹೆಚ್.ಎಸ್.ಗಗನಾ ಗ್ರಾಮದ ಎರಡನೇ ವಾರ್ಡಿನಿಂದ(ಅನಸೂಚಿತ ಪಂಗಡ ಮಹಿಳೆ) ಸೋಮವಾರ ವಷ್ಟೇ ಅವಿರೋಧ ಆಯ್ಕೆಯಾಗಿದ್ದಾರೆ. ಅವಿರೋಧ ಆಯ್ಕೆಯ ಸಂಭ್ರಮದಲ್ಲಿರುವಾಗಲೇ ಪತಿ ಬಾರದಲೋಕಕ್ಕೆ ಲೋಕಕ್ಕೆ ಹೋಗಿದ್ದು
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ದೊಡ್ಡರಾಯಪೇಟೆ ,ಕೂಡ್ಲೂರು ಗ್ರಾಮ ಪಂಚಾಯಿತಿಗೆ ಒಳಪಟ್ಟಿದೆ.

Exit mobile version