Allahabad: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸುವ ಹಿಂದೂಗಳ ಮನವಿಯನ್ನು ಪ್ರಶ್ನಿಸಿ ಮುಸ್ಲಿಂ (Gyanvapi Dispute -ALD HC) ಪರ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಅಲಹಾಬಾದ್
ಹೈಕೋರ್ಟ್ (Allahabad Highcourt) ತಿರಸ್ಕರಿಸಿದೆ. ಈ ಮೂಲಕ ಜ್ಞಾನವಾಪಿಯಲ್ಲಿ ನಡೆಯುತ್ತಿರುವ ಸಮೀಕ್ಷೆ ಮತ್ತು ಹಿಂದೂಗಳಿಗೆ ಇರುವ ಪೂಜೆ ಸಲ್ಲಿಸುವ ಹಕ್ಕನ್ನು ನ್ಯಾಯಾಲಯ ಸಮರ್ಥಿಸಿದೆ.
ವಾರಣಾಸಿಯ (Varanasi) ಜ್ಞಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ನಡುವಿನ ಮಾಲೀಕತ್ವದ ಕುರಿತು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಅಂಜುಮನ್ ಇಂತೇಜಾಮಿಯಾ ಮಸೀದಿ
ಸಮಿತಿಯು ಅರ್ಜಿಗಳನ್ನು ಸಲ್ಲಿಸಿದ್ದವು. ಆದರೆ ಹಿಂದೂ ಆರಾಧಕರು ಸಲ್ಲಿಸಿದ 1991ರ ಸಿವಿಲ್ ಮೊಕದ್ದಮೆಯ ನಿರ್ವಹಣೆಯ ವಿರುದ್ಧ ಎರಡು ಅರ್ಜಿಗಳನ್ನು ಮತ್ತು ಎಎಸ್ಐ (ASI) ಸಮೀಕ್ಷೆ ಆದೇಶದ
ವಿರುದ್ಧ ಮೂರು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ (Gyanvapi Dispute -ALD HC) ತಿರಸ್ಕರಿಸಿತು.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ (Rohit Ranjan Agarwal) ಅವರ ನೇತೃತ್ವದ ಏಕಸದಸ್ಯ ಪೀಠವು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಈ ಪ್ರಕರಣದ ವಿಚಾರಣೆಯನ್ನು
ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.
ಸಮೀಕ್ಷೆಯ ವರದಿ ಸಲ್ಲಿಕೆ : ಜ್ಷಾನ್ವಾಪಿ ಮಸೀದಿಯ ಸಮೀಕ್ಷೆಯನ್ನು ಪೂರ್ಣಗೊಳಿಸಿರುವ ಭಾರತೀಯ ಪುರಾತತ್ವ ಇಲಾಖೆ, ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ತನ್ನ ಅಂತಿಮ ವರದಿಯನ್ನು ಮುಚ್ಚಿದ
ಲಕೋಟೆಯಲ್ಲಿ ಸಲ್ಲಿಸಿದೆ. ಡಿಸೆಂಬರ್ (December) 18 ಸೋಮವಾರ ಮಧ್ಯಾಹ್ನ ಭಾರತೀಯ ಪುರಾತತ್ವ ಇಲಾಖೆ, ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವುದು ಇದೀಗ ತೀವ್ರ
ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಮೂಲಗಳ ಪ್ರಕಾರ, ಈ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗ ಮಾಡಲಾಗುತ್ತದೆಯೇ? ಹಿಂದೂ ಪರ ವಕೀಲರಿಗೆ ಅಥವಾ ಮುಸ್ಲಿಂ ಪರ ವಕೀಲರಿಗೆ ವರದಿಯ ಮಾಹಿತಿಯನ್ನು ನೀಡಲಾಗುತ್ತದೆಯೇ?
ಅನ್ನೋದೂ ಇನ್ನೂ ದೃಢಪಟ್ಟಿಲ್ಲ. ಈ ಪ್ರಕರಣದ ಕುರಿತ ಮುಂದಿನ ವಿಚಾರಣೆ ಡಿಸೆಂಬರ್ 21ರಂದು ನಡೆಯಲಿದೆ. ಈ ವೇಳೆ ನ್ಯಾಯಾಲಯದ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ. ಈ ತೀರ್ಪಿನ ಮೇಲೆ
ಇಡೀ ದೇಶದ ಕಣ್ಣು ನೆಟ್ಟಿದೆ.
ಇದನ್ನು ಓದಿ: ಪ್ರಧಾನಿ ಮೋದಿಯವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ: ಬರ ಪರಿಸ್ಥಿತಿ ಕುರಿತು ಚರ್ಚೆ