Tel Aviv: ಇಸ್ರೇಲಿ (hamas terrorists surrender to israel) ಪಡೆಗಳು ಗಾಜಾಪಟ್ಟಿಯ ಮೇಲೆ ನಡೆಸುತ್ತಿರುವ ಬಾಂಬ್ ದಾಳಿಯನ್ನು ನಿಲ್ಲಿಸಿದರೆ ತಕ್ಷಣವೇ ಎಲ್ಲಾ ಒತ್ತೆಯಾಳುಗಳನ್ನು
ಬಿಡುಗಡೆ ಮಾಡಲು ನಾವು ಸಿದ್ದರಿದ್ದೇವೆ ಎಂದು ಹಮಾಸ್ (Hamas) ಉಗ್ರರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಇಸ್ರೇಲ್ ಸೇನೆ ನಡೆಸುತ್ತಿರುವ ಭೀಕರ ದಾಳಿಯಿಂದ ಕಂಗೆಟ್ಟಿರುವ ಹಮಾಸ್ ಉಗ್ರರು ಇದೀಗ ಸಂಧಾನಕ್ಕೆ ಮುಂದಾಗಿದ್ದಾರೆ. ವರದಿಗಳ ಪ್ರಕಾರ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು
ಹಮಾಸ್ ಮುಂದಾಗಿದೆ. ಇಸ್ರೇಲಿ ಪಡೆಗಳು ಗಾಜಾದ ಮೇಲೆ ಬಾಂಬ್ (Bomb) ದಾಳಿ ಮಾಡುವುದನ್ನು ನಿಲ್ಲಿಸಿದರೆ ಎಲ್ಲಾ ನಾಗರಿಕ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಹಮಾಸ್
ಸಿದ್ಧವಾಗಿದೆ ಎಂದು ಹಮಾಸ್ನ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ (hamas terrorists surrender to israel) ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮಂಗಳವಾರ ಗಾಜಾ ಸಿಟಿ ಆಸ್ಪತ್ರೆಯ (Gaza City Hospital) ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ನೂರಾರು ಜನರು ಸಾವನ್ನಪ್ಪಿದ ಸ್ವಲ್ಪ ಸಮಯದ ನಂತರ ನಾಗರಿಕ ಒತ್ತೆಯಾಳುಗಳನ್ನು
ಬಿಡುಗಡೆ ಮಾಡಲು ಹಮಾಸ್ ಮುಂದಾಗಿದೆ. ಇಸ್ರೇಲ್ ಪಡೆಗಳು ಗಾಜಾ ಆಸ್ಪತ್ರೆಯ ಮೇಲಿನ ದಾಳಿಯ ಜವಾಬ್ದಾರಿಯನ್ನು ನಿರಾಕರಿಸಿದ್ದು, ಹಮಾಸ್ನಿಂದ ಉಡಾವಣೆಯಾದ ರಾಕೆಟ್ (Rocket)
ವಿಫಲವಾಗಿ ಆಸ್ಪತ್ರೆಯನ್ನು ಹೊಡೆದಿದೆ ಎಂದು ಇಸ್ರೇಲಿ ಹೇಳಿದೆ.
ವರದಿಗಳ ಪ್ರಕಾರ, ಆಸ್ಪತ್ರೆಯ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 300 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. ಗಾಜಾದ ಆಸ್ಪತ್ರೆಯ ಮೇಲೆ ಮಾರಣಾಂತಿಕ
ವೈಮಾನಿಕ ದಾಳಿ ನಡೆಸಿ ನೂರಾರು ಜನರನ್ನು ಕೊಂದ ನಂತರ ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ (Mahamood Abbas) ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.
ಗಾಜಾದಲ್ಲಿ ನಡೆಯುತ್ತಿರುವುದು ನರಮೇಧ. ಈ ಹತ್ಯಾಕಾಂಡವನ್ನು ನಿಲ್ಲಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ನಾವು ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುತ್ತೇವೆ. ಮೌನ ಇನ್ನು ಮುಂದೆ
ಸ್ವೀಕಾರಾರ್ಹವಲ್ಲ” ಎಂದು ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (Palestine Liberation Organization) ಹೇಳಿದೆ.
ಇಸ್ರೇಲಿ (Israel) ಪಡೆಗಳು ನಡೆಸುತ್ತಿರುವ ದಾಳಿಗಳಿಂದ ತೀವ್ರ ಹಾನಿಗೆ ಒಳಗಾಗಿರುವ ಹಮಾಸ್ ಇದೀಗ ಯದ್ದವನ್ನು ಮುಂದುವರೆಸಲಾಗದೇ ಮಂಡಿಯೂರಿದೆ ಎನ್ನಲಾಗುತ್ತಿದೆ. ಹಮಾಸ್
ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೂ ನಾವು ದಾಳಿ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಘೋಷಿಸಿದ್ದಾರೆ.
ಇದನ್ನು ಓದಿ: ರೈತರಿಗೆ 7 ತಾಸು ಕರೆಂಟನ್ನು ಹೊರ ರಾಜ್ಯದಿಂದ ಖರೀದಿಸಿಯಾದ್ರೂ ನೀಡುತ್ತೇವೆ: ಸಚಿವ ವೆಂಕಟೇಶ್ ಭರವಸೆ