Ahmedabad : ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ(Assembly Election) ಬಿಜೆಪಿ(Hardik Patel Vs JigneshMevani) ಪ್ರಚಂಡ ಗೆಲುವು ಸಾಧಿಸಿದೆ.150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವತ್ತ ಸಾಗುತ್ತಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದ ಪಾಟಿದಾರ್ ಸಮುದಾಯದ ಯುವನಾಯಕ ಹಾರ್ದಿಕ್ಪಟೇಲ್(Hardik Patel) ಇತ್ತೀಚೆಗೆ ಬಿಜೆಪಿಗೆ ಸೇರಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಅವರು, ವೀರಾಗಮಮ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಇನ್ನೊಂದೆಡೆ ಕಳೆದ ಬಾರಿ ಕಾಂಗ್ರೆಸ್ನಿಂದ ವಡ್ಗಾಮ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ದಲಿತ ಯುವನಾಯಕ ಜಿಗ್ನೇಶ್ಮೆವಾನಿ(Hardik Patel Vs JigneshMevani)ಈ ಬಾರಿ ಭಾರತೀಯ ಜನತಾ ಪಕ್ಷದ ಮಣಿಭಾಯ್ ವಘೇಲಾವಿರುದ್ದ ಸೋಲು ಕಂಡಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣಗಳೆಂದರೆ,
ಇದನ್ನೂ ನೋಡಿ : https://fb.watch/hhxiZ83cnZ/ ಅಂಧನಿಗೆ ವಂಚನೆ! ಸರ್ಕಾರದಿಂದ ಅಂಧನಿಗೆ ಮೋಸ.
- ಬಿಜೆಪಿಯು ಹಿರಿಯ ಶಾಸಕರಿಗೆ ಕೊಕ್ ನೀಡಿ ‘ಯಂಗ್ ಕ್ಯಾಬಿನೆಟ್’ ರಚನೆ ಮಾಡಿದ್ದು ಮತ್ತು ಅನೇಕ ಯುವಕರಿಗೆ ಈ ಬಾರಿ ಟಿಕೆಟ್ನೀಡಿರುವುದು.
- ಸಂಪುಟ ರಚನೆಯಲ್ಲಿ ಆದಿವಾಸಿ ಮತ್ತು ಪಾಟಿದಾರ್ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿತ್ತು.
ಇದನ್ನೂ ಓದಿ : https://vijayatimes.com/bjp-vs-congress-election-resut/
- ಪಾಟೀದಾರ್ ಸಮುದಾಯದ ಭೂಪೇಂದ್ರ ಪಟೇಲ್(Bhupendra Patel) ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಪಾಟೀದಾರ್ ಸಮುದಾಯದ ಬೆಂಬಲ ಗಳಿಸಿದ್ದು ವರವಾಯಿತು.
- ಪಾಟೀದಾರ್ ಚಳವಳಿ ನಾಯಕ ಹಾರ್ದಿಕ್ ಪಟೇಲ್ ಹಾಗೂ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಬಿಜೆಪಿಗೆ ಸೇರಿದ್ದು, ಕಾಂಗ್ರೆಸ್ಗೆ ಹಿನ್ನಡೆಯಾಯಿತು.
- ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) 27 ರ್ಯಾಲಿ ಮಾಡಿದ್ದರು. ಗೃಹ ಸಚಿವ ಅಮಿತ್ಶಾ ಪ್ರತಿ ಭಾನುವಾರ ಗುಜರಾತ್ಗೆ ಭೇಟಿ ನೀಡಿ, ಪ್ರಚಾರ ಕಾರ್ಯದ ಮೇಲ್ವುಸ್ತುವಾರಿ ವಹಿಸಿದ್ದರು.
- ಕಾಂಗ್ರೆಸ್(Congress) ಮತಗಳನ್ನು ಆಪ್ ವಿಭಜಿಸಿದ್ದರಿಂದ ಬಿಜೆಪಿಯ ಪ್ರಚಂಡ ಗೆಲುವು ಸಾಧಿಸಲು ಕಾರಣವಾಯಿತು.
- ಮಹೇಶ್.ಪಿ.ಎಚ್