ಹರಿದ್ವಾರ ಕುಂಭಮೇಳ :ಕೊರೋನಾ ಸೂಪರ್​ ಸ್ಪ್ರೆಡರ್​ ಆಗಲಿದೆಯಾ?

ಉತ್ತರಾಖಂಡ್‌, ಏ. 06: ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್​ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ಹರಸಾಹಸ ನಡೆಸುತ್ತಿದೆ. ಈ ನಡುವೆ ಸೋಂಕಿನ ಹರಡುವಿಕೆಗೆ ಕುಂಭ ಮೇಳವು ಕಾರಣವಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ತಂಡ ತಿಳಿಸಿದೆ. ಉತ್ತರಾಖಂಡದ ಹರಿದ್ವಾರದಲ್ಲಿ ಏಪ್ರಿಲ್​ 1ರಿಂದ ಕುಂಭ ಮೇಳ ನಡೆಯುತ್ತಿದ್ದು, ಇದು ಕೊರೋನಾ ಮತ್ತಷ್ಟು ಹರಡುವಿಕೆಗೆ ಕಾರಣವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಂಭ ಮೇಳವೂ ಕೊರೋನಾ ಸೂಪರ್​ ಸ್ಪ್ರೆಡರ್​ ಆಗಬಹುದಾಗಿದೆ. ಈ ಹಿನ್ನಲೆ ನಿಗದಿಗೂ ಮೊದಲೇ ಕಾರ್ಯಕ್ರಮವನ್ನು ಮುಗಿಸುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಧಿಕಾರಿಗಳು ಎಂದು ಎಎನ್​ಐ ವರದಿ ಮಾಡಿದೆ. ಇನ್ನು ಏಪ್ರಿಲ್​ 1 ರಿಂದ ಆರಂಭವಾಗಿರುವ ಈ ಕುಂಭಮೇಳ ಇದೇ ಏಪ್ರಿಲ್​ 30ರವರೆಗೆ ನಡೆಯಲಿದೆ.

Exit mobile version