Bengaluru: ಬೆಂಗಳೂರು (Bengaluru) ನಗರದ ಜನರಿಗೆ ಸಂಚರಿಸಲು ಬಿಎಂಟಿಸಿ ಬಸ್ಗಳ ಅತೀ ಮುಖ್ಯವಾಗಿದ್ದು, ಕೆಲವು ಬಸ್ಗಳಲ್ಲಿ ಪ್ರಯಾಣಿಕರಿಗೆ ಮುಂದಿನ ನಿಲ್ದಾಣದ ಹೆಸರು ಸೂಚಿಸುವ ಆಡಿಯೋ ಪ್ರಕಟಣೆ ಹೊರಡಿಸಲಾಗುತ್ತಿತ್ತು. ಆದರೆ ಆಡಿಯೋ ಪ್ರಕಟಣೆ ನಿಲ್ಲಿಸಿದ ಹಿನ್ನೆಲೆ ನಿವಾಸಿಯೊಬ್ಬರು ಹೈಕೋರ್ಟ್ಗೆ (Highcourt) ಅರ್ಜಿ ಸಲ್ಲಿಸಿದ್ದು, ಈ ವಿಚಾರಣೆ ನಡೆಸಿದ ಕೋರ್ಟ್ ಏಪ್ರಿಲ್ (April) 15ರ ಒಳಗಾಗಿ ಧ್ವನಿ ಪ್ರಕಟಣೆ ವ್ಯವಸ್ಥೆ ಅಳವಡಿಸುವಂತೆ ಗಡುವು ನೀಡಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ (Prasanna B Varale) ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ಹೊರಡಿಸಿದ್ದು, ಕೆಲವು ಬಸ್ಗಳಲ್ಲಿ ಆಡಿಯೋ (Audio) ಪ್ರಕಟಣೆಗಳನ್ನು ಅಳವಡಿಸಲಾಗಿತ್ತು. ಅದನ್ನು ಈಗ ನಿಲ್ಲಿಸಲಾಗಿದೆ ಎಂದು ಎನ್ಜಿಒ ಶ್ರೇಯಸ್ ಗ್ಲೋಬಲ್ ಟ್ರಸ್ಟ್ (NGO Shreyas Global Trust) ನಡೆಸುತ್ತಿರುವ ವಕೀಲ ಮತ್ತು ದೃಷ್ಟಿಹೀನ ವ್ಯಕ್ತಿ ಶ್ರೇಯಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಭಾಗೀಯ ಪೀಠ ಕೈಗೆತ್ತಿಕೊಂಡಿತು.
ವಿಚಾರಣೆ ವೇಳೆ ಬಿಎಂಟಿಸಿ (BMTC) ಪರವಾದ ಮಂಡಿಸಿದ ವಕೀಲರು, ಮುಂಬರುವ ನಿಲ್ದಾಣಗಳ ಬಗ್ಗೆ ಜನರಿಗೆ ತಿಳಿಸಲು ಶೇಕಡಾ 58ರಷ್ಟು ಬಸ್ಗಳಲ್ಲಿ ಆಡಿಯೋ ವ್ಯವಸ್ಥೆ ಅಳವಡಿಸಲಾಗಿದ್ದು, 2,562 ವಾಹನಗಳಿಗೆ ಅಳವಡಿಕೆ ಮಾಡಿಲ್ಲ. ಮುಂದಿನ ಆರು ತಿಂಗಳಲ್ಲಿ 1,141 ಬಸ್ಗಳಲ್ಲಿ ಆಡಿಯೋ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಅಳವಡಿಕೆ ಮಾಡದೇ ಇದ್ದಲ್ಲದೆ ಯಾವುದೇ ಕ್ಷಮೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ ಏಪ್ರಿಲ್ 18ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತು. ವಾದ ಆಲಿಸಿದ ವಿಭಾಗೀಯ ಪೀಠ, 2024ರ ಏಪ್ರಿಲ್ 15 ರವರೆಗೆ ಬಸ್ಗಳಲ್ಲಿ ಆಡಿಯೋ ಅಳವಡಿಕೆ ಮಾಡುವಂತೆ ನಿರ್ದೇಶನ ನೀಡಿತು.
50 ತೀರ್ಪುಗಳನ್ನು ಪ್ರಕಟಿಸಿ ದಾಖಲೆ ಬರೆದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ
ಬೆಂಗಳೂರು: ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್ (Karnataka Highcourt)ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಬುಧವಾರ 50 ತೀರ್ಪುಗಳನ್ನು ಪ್ರಕಟಿಸಿದ್ದು, ಒಂದೇ ದಿನದಲ್ಲಿ ಅತ್ಯಧಿಕ ತೀರ್ಪು ನೀಡಿದ್ದಾರೆ. ಈ 50 ತೀರ್ಪುಗಳಲ್ಲಿ ಬೆಂಗಳೂರಿನ ಪ್ರಧಾನ ಪೀಠದಲ್ಲಿ ಕೇಳಿದ ಮತ್ತು ಕಾಯ್ದಿರಿಸಿದ ಪ್ರಕರಣಗಳ 25 ತೀರ್ಪುಗಳು ಮತ್ತು ಹೈಕೋರ್ಟ್ನ ಧಾರವಾಡ ಪೀಠದಲ್ಲಿ ಕೇಳಿದ ಮತ್ತು ಕಾಯ್ದಿರಿಸಿದ ಪ್ರಕರಣಗಳ 25 ತೀರ್ಪುಗಳು ಸೇರಿವೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ (M Nagaprasanna) ಅವರು ಬುಧವಾರ ಒಂದೇ ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸುವ ಮೂಲಕ ದಾಖಲೆ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕದ ಹೈಕೋರ್ಟ್ನ ನ್ಯಾಯಾಧೀಶರೊಬ್ಬರು ಒಂದೇ ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಎಂಎಲ್ಸಿ ಸೂರಜ್ ರೇವಣ್ಣ (MLC Suraj Revanna) ಅವರ ಆಯ್ಕೆ ವಿರುದ್ಧದ ಅರ್ಜಿಗಳ ತೀರ್ಪುಗಳು ಮತ್ತು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ವಿರುದ್ಧದ ಲಂಚ ಆರೋಪದ ಪ್ರಕರಣಗಳ ತೀರ್ಪುಗಳು ಕೂಡ ಇದರಲ್ಲಿ ಸೇರಿವೆ.
ಭವ್ಯಶ್ರೀ ಆರ್ ಜೆ