New Delhi: ಭಾರತ ಮತ್ತು ಮಾಲ್ಡೀವ್ಸ್ (Maldives) ನಡುವೆ ಸಂಘರ್ಷ ಮುಂದುವರೆದಿರುವ ಹಿನ್ನಲೆಯಲ್ಲಿ ಭಾರತ ಸರ್ಕಾರ ಮೇ 10 ರೊಳಗೆ ತನ್ನ ಎಲ್ಲಾ ಯೋಧರನ್ನು ಭಾರತಕ್ಕೆ ವಾಪಾಸ್ ಕರೆಸಿಕೊಳ್ಳಲು ಒಪ್ಪಿರುವುದಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu), ಭಾರತ ಸರಕಾರವು ಮಾರ್ಚ್ 15 ರ ಮೊದಲು ದ್ವೀಪಸಮೂಹ ರಾಷ್ಟ್ರದಿಂದ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳುವಂತೆ ಪ್ರಸ್ತಾಪಿಸಿದ್ದಾರೆ.ಹಿಂದಿನ ಮಾಲ್ದೀವ್ಸ್ ಸರಕಾರದ ಕೋರಿಕೆಯ ಮೇರೆಗೆ ಭಾರತವು ಹಲವಾರು ವರ್ಷಗಳಿಂದ ಸಣ್ಣ ಮಿಲಿಟರಿ ಉಪಸ್ಥಿತಿಯನ್ನು ಕಾಯ್ದುಕೊಂಡು ಬಂದಿದೆ. ಇತ್ತೀಚಿನ ಸರಕಾರಿ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಮಾಲ್ದೀವ್ಸ್ ನಲ್ಲಿ ಭಾರತದ 80 ಸೇನಾ ಸಿಬಂದಿ ಇದ್ದು, ಪ್ರಾಥಮಿಕವಾಗಿ ಸಾಗರ ಭದ್ರತೆ ಮತ್ತು ವಿಪತ್ತು ಪರಿಹಾರದಲ್ಲಿ ಸಹಾಯ ಮಾಡುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಭಾರತೀಯ ಮಿಲಿಟರಿ (Militory) ಸಿಬಂದಿ ಮಾಲ್ದೀವ್ಸ್ ನಲ್ಲಿ ಉಳಿಯಲು ಸಾಧ್ಯವಿಲ್ಲ. ಎಂದು ಮಾಲ್ಡೀವ್ಸ್ ಅಧ್ಯಕ್ಷ ಡಾ ಮೊಹಮ್ಮದ್ ಮುಯಿಜು ಹೇಳಿಕೆ ನೀಡಿರುವ ಕಾರಣ ಮಾಲ್ಡೀವ್ಸ್ನಲ್ಲಿನ ಮೂರು ವಾಯುಯಾನ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಮಿಲಿಟರಿ ಸಿಬ್ಬಂದಿಯನ್ನು ಮೇ 10 ರೊಳಗೆ ಭಾರತ ವಾಪಸ್ಸು ಕರೆಸಿ ಕೊಳ್ಳಲಿದೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದ್ದು ಮಾರ್ಚ್ (March 10) ರೊಳಗೆ ಮೊದಲ ಹಂತದ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದೂ ಅದು ತಿಳಿಸಿದೆ.
ಚೀನಾ (China) ಪರವಾಗಿ ಮಾತನಾಡುವ ಮುಯಿಝು, ಮಾರ್ಚ್ 15 ರೊಳಗೆ ತನ್ನ ಎಲ್ಲಾ ಮಿಲಿಟರಿ ಸಿಬ್ಬಂದಿಯನ್ನು ದ್ವೀಪ ರಾಷ್ಟ್ರದಿಂದ ಹಿಂತೆಗೆದುಕೊಳ್ಳುವಂತೆ ಭಾರತವನ್ನು ಕಳೆದ ತಿಂಗಳು ಕೇಳಿಕೊಂಡಿತ್ತು.ಮಾಲ್ಡೀವ್ಸ್ನ ಜನರಿಗೆ ಮಾನವೀಯ ಮತ್ತು ವೈದ್ಯಕೀಯ ಸ್ಥಳಾಂತರಿಸುವ ಸೇವೆಗಳನ್ನು ಒದಗಿಸುವ ಭಾರತೀಯ ವಾಯುಯಾನ ವೇದಿಕೆಗಳ ನಿರಂತರ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಲು ಪರಸ್ಪರ ಕಾರ್ಯಸಾಧ್ಯವಾದ ಪರಿಹಾರಗಳನ್ನು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೋರ್-ಗ್ರೂಪ್ (Core-Group) ಸಭೆಯ ನಂತರ ಹೇಳಿಕೆಯಲ್ಲಿ ತಿಳಿಸಿದೆ.