ಲೋಕಸಭೆಯ ಸಮರಕ್ಕೂ ಮುನ್ನವೇ ಬಿಜೆಪಿ (INDIA decide to boycott media) ವಿರುದ್ಧ ಒಗ್ಗೂಡಿರುವ ವಿರೋಧ ಪಕ್ಷಗಳ ಐಎನ್ಡಿಐಎ (INDIA) ಬಣವು, ಒಂದು ಗುಂಪಿನ ಸುದ್ದಿವಾಹಿನಿ
ನಿರೂಪಕರು ಮತ್ತು ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಯಾವ ನಿರೂಪಕರ ಚರ್ಚೆ ಹಾಗೂ ಶೋಗಳನ್ನು ಬಹಿಷ್ಕರಿಸಬಹುದು ಎಂಬ ಪಟ್ಟಿಯನ್ನು ವಿರೋಧ ಪಕ್ಷಗಳ
ನಾಯಕರು (INDIA decide to boycott media) ಸಿದ್ಧಪಡಿಸಲಿದ್ದಾರೆ.

ನಿರೂಪಕರು ಮತ್ತು ಕಾರ್ಯಕ್ರಮಗಳ ಪಟ್ಟಿ ತಯಾರಿಸುವ ನಿರ್ಧಾರವನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮುಖ್ಯಸ್ಥರಾದ ಶರದ್ ಪವಾರ್ (Sharad Pawar) ಅವರ ನಿವಾಸದಲ್ಲಿ ನಡೆದ
ಐಎನ್ಡಿಐಎ ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾಧ್ಯಮದ ಒಂದು ವರ್ಗವು ದ್ವೇಷ, ಹಗೆತನ ಸಾಧಿಸುತ್ತಿದೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ
ಆರೋಪಿಸುತ್ತಿದ್ದು, ರಾಹುಲ್ ಗಾಂಧಿ (Rahul Gandhi) ಅವರ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್ ಪದೇ ಪದೇ ಮಾಧ್ಯಮದ ಒಂದು ವರ್ಗವು ಅದಕ್ಕೆ ಅತ್ಯಲ್ಪ ಪ್ರಚಾರ ನೀಡುತ್ತಿದೆ
ಎಂದು ಆರೋಪಿಸಿತ್ತು.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಅವರು ಜನರು ಯಾತ್ರೆಗೆ ಬೆಂಬಲ ನೀಡಿದ್ದರು, ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಪ್ರಚಾರ ಮಾಡಿದ್ದರು ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು.
ಹಾಗಿದ್ದರೂ ಮುಖ್ಯವಾಹಿನಿ ಮಾಧ್ಯಮಗಳು ಅದನ್ನು ‘ಬಹಿಷ್ಕರಿಸುವುದನ್ನು’ ಮುಂದುವರಿಸಿದ್ದವು ಎಂದು ಆರೋಪಿಸಿದ್ದು, ಇದಕ್ಕೆ ತಕ್ಕ ಎದಿರೇಟು ನೀಡುವ ಮೂಲಕ ಸೇಡು ತೀರಿಸಿಕೊಳ್ಳಲು ಕೆಲವು
ನಾಯಕರು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಪಾದಕರು ಯಾತ್ರೆಯನ್ನು ಬಹಿಷ್ಕರಿಸಿದ್ದಾರೆ ಎನ್ನುವುದು ನನ್ನ ಆರೋಪವಾಗಿದೆ. ಆದರೆ ಲಕ್ಷಾಂತರ ಜನರು ಈ ಆಂದೋಲನಕ್ಕೆ ಸೇರಿಕೊಳ್ಳುತ್ತಿದ್ದಾರೆ ಹಾಗಾಗಿ ಅಷ್ಟು ದೊಡ್ಡ ಆಂದೋಲನವನ್ನು
ನೀವು ತೋರಿಸುವುದಿಲ್ಲವೇ ಎಂದು ರಾಜಸ್ಥಾನ ಸಿಎಂ ಪ್ರಶ್ನಿಸಿದ್ದರು. ಒಂದು ತಿಂಗಳ ಮಟ್ಟಿಗೆ ಟೆಲಿವಿಷನ್ ಕಾರ್ಯಕ್ರಮಗಳನ್ನು 2019ರ ಲೋಕಸಭೆ ಚುನಾವಣೆ ನಡೆದ ಮೇ ತಿಂಗಳಲ್ಲಿ ಕೂಡ
ಕಾಂಗ್ರೆಸ್ (Congress) ಬಹಿಷ್ಕರಿಸಿತ್ತು.

ಎಲ್ಲಾ ಮಾಧ್ಯಮ ವಾಹಿನಿಗಳು/ ಸಂಪಾದಕರು ತಮ್ಮ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪ್ರತಿನಿಧಿಗಳಿಗೆ ಜಾಗ ನೀಡದಂತೆ ಮನವಿ ಮಾಡಲಾಗಿದ್ದು, ಒಂದು ತಿಂಗಳ ಮಟ್ಟಿಗೆ ಟೆಲಿವಿಷನ್ (Television)
ಚರ್ಚೆಗಳಿಗೆ ವಕ್ತಾರರನ್ನು ಕಳುಹಿಸದೆ ಇರಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂದು ಪಕ್ಷದ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಸಮನ್ವಯ ಸಮಿತಿಯು ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತಂತೆ ಪ್ರಕ್ರಿಯೆ ಆರಂಭಿಸಲು ಕೂಡ
ನಿರ್ಧರಿಸಿದೆ. ಸೀಟು ಹಂಚಿಕೆ ಸೂತ್ರವನ್ನು ಆದಷ್ಟು ಶೀಘ್ರವೇ ಅಂತಿಮಗೊಳಿಸಲು ನಾಯಕರು ಬಯಸಿದ್ದಾರೆ.
ಇದನ್ನು ಓದಿ :ಐಎನ್ಡಿಐಎ ಬಣವು ಕೆಲ ಸುದ್ದಿ ನಿರೂಪಕರು, ಟಿವಿ ಶೋ ಬಹಿಷ್ಕಾರಕ್ಕೆ ನಿರ್ಧಾರ, ಶೀಘ್ರದಲ್ಲಿಯೇ ಪಟ್ಟಿ ಪ್ರಕಟ
- ಭವ್ಯಶ್ರೀ ಆರ್.ಜೆ