ಪಾಕ್ ಪರ ಪೋಸ್ಟ್ ಮಾಡಿದ ಯುವತಿ : ವಕಾಲತ್ತು ವಹಿಸದಂತೆ ಒತ್ತಾಯ!

traitor

ಪಾಕಿಸ್ತಾನದ ಪರ ಪೋಸ್ಟ್ ಹಾಕಿದ ಯುವತಿಯ ಪರವಾಗಿ ರಾಜ್ಯದ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಹಿಂದೂ ಸಂಘಟನೆಗಳು ಮುಧೋಳದ ವಕೀಲರ ಸಂಘಕ್ಕೆ ಮನವಿ ಸಲ್ಲಿಸಿವೆ.

ಮುಧೋಳ ನಗರದ ನಿವಾಸಿಯಾದ ಕುತ್ತುಮಾ ಶೇಖ್ ಎಂಬ ಯುವತಿ ಸಾಮಾಜಿಕ ಜಾಲತಾಣದಲ್ಲಿ ಮಾರ್ಚ್ 23ರಂದು ‘ಸೆಲೆಬ್ರೇಟಿಂಗ್ ಪಾಕಿಸ್ತಾನ್ ರೆವಲ್ಯೂಷನ್ ಡೇ’ ಎಂದು ಪೋಸ್ಟ್ ಮಾಡಿದ್ದಳು. ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಯುವತಿಯ ವಿರುದ್ದ ಅರುಣ್ ಭಜಂತ್ರಿ ಎಂಬುವವರು ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮುಧೋಳ ಪೋಲಿಸರು ಕುತ್ತುಮಾ ಶೇಖ್ ಅವಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಇದಕ್ಕೂ ಮುಂಚೆ ಒಂದು ಬಾರಿ ‘ಲವ್ ಪಾಕಿಸ್ತಾನ್’ ಎಂಬ ಪೋಸ್ಟ್ ಅನ್ನು ಕುತ್ತುಮಾ ಶೇಖ್ ಹಾಕಿದ್ದಳು.

ಹೀಗಾಗಿ ಯುವತಿ ಕುತ್ತುಮಾ ಶೇಖ್ ಮೇಲೆ ಇದೀಗ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಈ ಯುವತಿ ಅನೇಕ ಬಾರಿ ರಾಷ್ಟ್ರವಿರೋಧಿ ಪೋಸ್ಟ್‍ಗಳನ್ನು ಹಾಕಿದ್ದಾಳೆ. ಅವಳಿಗೆ ಕಾನೂನಿನ ಮೂಲಕ ಸೂಕ್ತ ಶಿಕ್ಷೆಯಾಗಬೇಕು. ಈ ನೆಲೆದ ಅನ್ನ ತಿಂದು ವೈರಿ ರಾಷ್ಟ್ರವನ್ನು ಪ್ರೀತಿಸುವ ಇಂತಹ ಮತಾಂಧ ರಾಷ್ಟ್ರದ್ರೋಹಿಗಳ ಪರವಾಗಿ ಯಾರು ವಕಾಲತ್ತು ವಹಿಸಬಾರದು ಎಂದು ಹಿಂದೂ ಸಂಘಟನೆಗಳ ಒಕ್ಕೂಟ ವಕೀಲರನ್ನು ಒತ್ತಾಯಿಸಿವೆ. ದೇಶದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿವೆ. ಈಗಲೇ ಇಂತಹ ಕ್ರಿಮಿಗಳನ್ನು ಮಟ್ಟ ಹಾಕಬೇಕು.

ನ್ಯಾಯಾಲಯಗಳು ಕೂಡಾ ಇಂತಹ ರಾಷ್ಟ್ರದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಭಾರತದ ಅಸ್ಮಿತೆಯನ್ನು ಗೌರವಿಸದ ದ್ರೋಹಿಗಳನ್ನು ಯಾರು ಕ್ಷಮಿಸಬಾರದು. ಯಾರು ವಕಾಲತ್ತು ವಹಿಸಬಾರದು ಎಂದು ಆಗ್ರಹಿಸಲಾಗಿದೆ. ಇನ್ನು ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಮುಧೋಳ ನಗರ ಠಾಣಾ ಪೋಲಿಸರು ತನಿಖೆ ಪ್ರಾರಂಭಿಸಿದ್ದಾರೆ. ಯುವತಿ ಕುತ್ತುಮಾ ಶೇಖ್ ಈ ಹಿಂದೆ ಮಾಡಿದ್ದಳು ಎನ್ನಲಾದ ಪೋಸ್ಟ್‍ಗಳಿಗಾಗಿ ಪೋಲಿಸರು ಶೋಧನೆ ನಡೆಸುತ್ತಿದ್ದಾರೆ.

Exit mobile version