ರಾಮ ಮಂದಿರ ನಿರ್ಮಾಣಕ್ಕೆ `ಜಾಮಿಯಾ ಮಸೀದಿ’ಯಿಂದ ದೇಣಿಗೆ…!

ದಾವಣಗೆರೆ, ಫೆ. 05: ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನ ಈಗಾಗಲೇ ದೇಶಾದ್ಯಂತ ನಡೆಯುತ್ತಿದ್ದು,ಅನೇಕರು ತಮಗೆ ಅನುಕೂಲವಿದ್ದಷ್ಟು ದೇಣಿಗೆ ನೀಡಿದ್ದಾರೆ. ಇದೀಗ ಶ್ರೀರಾಮಮಂದಿರ ನಿರ್ಮಾಣಕ್ಕೆ ಜಮೀಯಾ ಮಸೀದಿಯ ಗುರುಗಳು ಮತ್ತು ಮುಸ್ಲಿಂ ಮುಖಂಡರು ದೇಣಿಗೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜಾಮೀಯಾ ಮಸೀದಿ ಗುರುಗಳು ಮತ್ತು ಮುಖಂಡರು ದೇಣಿಗೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಆರ್ ಎಸ್‌ಎಸ್ ಸ್ವಯಂ ಸೇವಕರು ಮಸೀದಿಗೆ ಹೋದಾಗ ಮುಸ್ಲಿಂ ಗುರುಗಳು ಬರ ಮಾಡಿಕೊಂಡು ದೇಣಿಗೆ ನೀಡಿದ್ದಾರೆ. ಈ ಮೂಲಕ ಸೌಹಾರ್ದತೆ ಹಾಗೂ ಭಾವೈಕ್ಯತೆ ನ್ಯಾಮತಿ ಸಾಕ್ಷಿಯಾಗಿದೆ.

ಶ್ರೀರಾಮನ ಭವ್ಯ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ಇಂತಹ ಕಾರ್ಯಕ್ಕೆ ಮುಸ್ಲಿಂ ಮುಖಂಡರು ದೇಣಿಗೆ ಸಮರ್ಪಿಸಿರುವುದು ಭಾರತ ಜಾತ್ಯತೀತ ರಾಷ್ಟ್ರ ಎನ್ನುವುದು ಸಾಬೀತು ಮಾಡಿದ್ದಾರೆ ಎಂದು ಆರ್ ಎಸ್‌ಎಸ್ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

Exit mobile version