ರಾಜ್ಯದ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಏಕೈಕ ಪಕ್ಷ ಜನತಾದಳ ಮಾತ್ರ : ಹೆಚ್.ಡಿ ಕುಮಾರಸ್ವಾಮಿ

Nelamangala : ನೆಲಮಂಗಲದಲ್ಲಿ ಪಂಚರತ್ನ ರಥಯಾತ್ರೆ(Pancharatna Ratha Yatre) ಸಾಗುವ ವೇಳೆ ಮಾತನಾಡಿದ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ(JDS Is Hope Says HDK), ರಾಜ್ಯದ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಏಕೈಕ ಪಕ್ಷ ಜನತಾದಳ ಮಾತ್ರ ಎಂದು ಹೇಳಿದರು.

ರಾಜ್ಯಾದ್ಯಂತ ಜೆಡಿಎಸ್ ಪಕ್ಷ ಈಗಾಗಲೇ ಪಂಚರತ್ನ ರಥಯಾತ್ರೆ ಭರ್ಜರಿಯಾಗಿ ಆರಂಭಿಸಿದ್ದು, ಮುಂಬರುತ್ತಿರುವ 2023ರ ವಿಧಾನಸಭೆ ಚುನಾವಣೆಯತ್ತ(JDS Is Hope Says HDK) ತನ್ನ ಚಿತ್ತವನ್ನು ಹರಿಸಿದೆ.

ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ(HD Kumarswamy) ಪಂಚರತ್ನ ಯಾತ್ರೆಯಲ್ಲಿ ನಿರತರಾಗಿದ್ದು, ಚುನಾವಣೆ ಹಂತದ ಪ್ರಮುಖ ಘಟ್ಟದಲ್ಲಿ ಆಯಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

ಈ ವೇಳೆ ನೆಲಮಂಗಲ ಪ್ರವೇಶಿದಾಗ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಏಕೈಕ ಪಕ್ಷ ಜನತಾದಳ ಮಾತ್ರ ಎಂದು ಹೇಳಿ, ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು.

ಇನ್ನು ಮೊನ್ನೆಯಷ್ಟೇ ಪಂಚರತ್ನ ರಥಯಾತ್ರೆ 6ನೇ ದಿನದ ಬಗ್ಗೆ ಟ್ವೀಟ್(Tweet) ಮಾಡಿದ ಅವರು,

ಇದನ್ನೂ ಓದಿ : https://vijayatimes.com/priyank-questions-bjp-govt/

ನಾನು ಶಿಡ್ಲಘಟ್ಟ ಕ್ಷೇತ್ರದ ಸಾದಲಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದೆ. ಈ ವೇಳೆ ಅಲ್ಲಿ ಸರಕಾರ ಮತ್ತು ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದಿರುವ,

ನೊಳಂಬ ಅರಸರ ಕಾಲದಲ್ಲಿ ಕಟ್ಟಲ್ಪಟ್ಟಿರುವ ಶ್ರೀ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದೆ‌.

https://twitter.com/hd_kumaraswamy/status/1597926936143343616?s=20&t=Bv-npZ2Y2IPqv2NbipmOpQ

ಆ ದೇಗುಲದ ದುಸ್ಥಿತಿಯನ್ನು ಕಂಡು ಬಹಳ ದುಃಖವಾಯಿತು. ಐತಿಹಾಸಿಕ, ಪಾರಂಪರಿಕ ವೈಭವದ ಪ್ರತೀಕವಾದ ಈ ತಾಣವನ್ನು  ಜನತಾದಳ ಪಕ್ಷ ಅಧಿಕಾರಕ್ಕೆ ಬಂದರೆ ತಪ್ಪದೇ ಅಭಿವೃದ್ಧಿಪಡಿಸಲಿದೆ.

ಈ ದೇಗುಲ ಮಾತ್ರವಲ್ಲ, ಜಿಲ್ಲೆಯ ಎಲ್ಲಾ ಐತಿಹಾಸಿಕ ದೇಗುಲಗಳಿಗೆ ಕಾಯಕಲ್ಪ ನೀಡಲಾಗುವುದು ಎಂದಿದ್ದಾರೆ.

ಅಷ್ಟೇ ಅಲ್ಲದೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಪಾಳು ಬಿದ್ದಿರುವ ಎಲ್ಲ ಐತಿಹಾಸಿಕ ದೇಗುಲಗಳ ಜೀರ್ಣೋದ್ಧಾರ ಮಾಡಲಾಗುವುದು ಹಾಗೂ ಎಲ್ಲಾ ಪುಣ್ಯಕ್ಷೇತ್ರಗಳು ಐತಿಹಾಸಿಕ ತಾಣಗಳ ಸರ್ಕ್ಯೂಟ್ ಮಾಡಲಾಗುವುದು ಎಂದು ಘೋಷಣೆ ಮಾಡಿದರು.

https://twitter.com/hd_kumaraswamy/status/1598155747720065024?s=20&t=Bv-npZ2Y2IPqv2NbipmOpQ

ಇನ್ನು ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಸಾದಲಿ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮುನ್ನ ಗ್ರಾಮಕ್ಕೆ ಎತ್ತಿನಗಾಡಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಅಪಾರ ಬೆಂಬಲಿಗರೊಂದಿಗೆ ಗ್ರಾಮ ಪ್ರವೇಶಿಸಿದರು.

Exit mobile version