‘ನಿಮ್ಮ ರಾಜಕೀಯಕ್ಕೆ ನೀವು ಕೈತಟ್ಟಿದ್ದೀರಿ’ : ಇಬ್ರಾಹಿಂ ಹೇಳಿಕೆಗೆ ಜೋಗತಿ ಮಂಜಮ್ಮ ಬೇಸರ!

CM Ibrahim

‘ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ’ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ(JDS President) ಸಿ.ಎಂ.ಇಬ್ರಾಹಿಂ(CM Ibrahim) ಬಗ್ಗೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗುತಿ(Manjamma Joguthi) ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, “ನನ್ನ ತಂದೆ ಕೂಡ ಹೀಗೆ ಹೇಳಿದ್ದರು – ಗಂಡಾಗಿದ್ದರೆ ಕೆಲಸ ಕೊಡಿಸುತ್ತಿದ್ದೆ, ಹೆಣ್ಣಾಗಿದ್ದರೆ ಮದುವೆ ಮಾಡಿಸುತ್ತಿದ್ದೆ, ಕುರುಡ ಅಥವಾ ಕುಂಟನಾಗಿದ್ದರೆ ಮನೆಯಲ್ಲಿ ಇಟ್ಟುಕೊಂಡು ಊಟ ಹಾಕುತ್ತಿದ್ದೆ. ಆದರೆ ನಾನು ಮಂಗಳಮುಖಿ ಕಲಾವಿದೆಯಾದೆ. ಕನ್ನಡತಿಯಾದೆ, ಸಮಾಜ ಗೌರವಿಸುತ್ತಿದೆ. ನೀವು ಹೀಗೆ ಅವಮಾನ ಮಾಡಬಾರದಿತ್ತು ಸರ್, ನಿಮ್ಮ ರಾಜಕೀಯಕ್ಕೆ ನೀವು ಕೈತಟ್ಟಿದ್ದೀರಿ ಇವತ್ತು!” ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ. ಇವರ ಜೊತೆ ಜಗಳ ಆಡಲು ಸಾಧ್ಯವಿಲ್ಲ. ಗಂಡಾಗಿದ್ದರೆ ಬಡಿದಾಡಲು ಗಂಡಸರನ್ನು ಕಳುಹಿಸುತ್ತಿದ್ದೆ, ಹೆಣ್ಣಾಗಿದ್ದರೆ ಬಡಿದಾಡಲು ಹೆಂಗಸರನ್ನು ಕಳುಹಿಸುತ್ತಿದ್ದೆ. ಆದರೆ ಈ ಸರ್ಕಾರ ಗಂಡೂ ಅಲ್ಲ, ಹೆಣ್ಣು ಅಲ್ಲ, ಏನೇ ಕೇಳಿದರು ಕೈ ತಟ್ಟುತ್ತಾರೆ. ಆಗ ನಾವು ಹಿಂದೆ ಸರಿಯಬೇಕಾಗುತ್ತದೆ.

ಎಷ್ಟೇ ಬೈದರೂ, ಟೀಕಿಸಿದರು ಹ್ಹ..ಹ್ಹ..ಹ್ಹ.. ಅಂತಾ ನಗುತ್ತಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಈ ವೇಳೆ ಮಂಗಳಮುಖಿಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು.

Exit mobile version