ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಬಲಿ

ಮೈಸೂರು, ಡಿ. 24: ಕಾಡಾನೆ‌ ದಾಳಿಗೆ ಫಾರೆಸ್ಟ್‌ ವಾಚರ್ ಮೃತಪಟ್ಟಿರುವ ಘಟನೆ ನಡೆದಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಫಾರೆಸ್ಟ್ ವಾಚರ್ ಗುರುರಾಜ್ ಎಂಬುವವರು ಮೃತಪಟ್ಟಿದ್ದಾರೆ. ಗುರುರಾಜ್ ಅವರು ಅರಣ್ಯ ಗಸ್ತಿನಲ್ಲಿದ್ದ ವೇಳೆ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಮೃತ ಗುರುರಾಜ್ ಅವರು ನಾಗರಹೊಳೆ ‌ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕ್ಷೇಮಾಭಿವೃದ್ಧಿ ನೌಕರರಾಗಿದ್ದರು.

Exit mobile version