ಕೇರಳ : ಸಿ.ಎಂ ಪ್ರಮಾಣ ವಚನಕ್ಕೆ ಬೀಡಿ ಕಾರ್ಮಿಕನಿಗೆ ಆಹ್ವಾನ!

ತಿರುವನಂತಪುರ, ಮೇ. 19: ಎರಡನೇ ಬಾರಿಗೆ ಕೇರಳದ ಮುಖ್ಯಮಂತ್ರಿಯಾಗುತ್ತಿರುವ ಪಿಣರಾಯಿ ವಿಜಯನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿತರಾಗಿರುವ 500 ಗಣ್ಯವ್ಯಕ್ತಿಗಳಲ್ಲಿ (ವಿಐಪಿ) ಬೀಡಿ ಕಾರ್ಮಿಕರೊಬ್ಬರು ಸೇರಿದ್ದಾರೆ!

ಕಣ್ಣೂರಿನ ಕುರುವ ಗ್ರಾಮದ ಚಲಾದನ್ ಜನಾರ್ಧನನ್ ವಿಶೇಷ ಆಹ್ವಾನಕ್ಕೆ ಭಾಜನರಾದ ಬೀಡಿ ಕಾರ್ಮಿಕ. ಕೋವಿಡ್ ಲಸಿಕಾ ಆಂದೋಲನದ ಭಾಗವಾಗಿ ಚಲಾದನ್ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು ₹ 2,00,850 ಹಣದಲ್ಲಿ ₹ 2ಲಕ್ಷವನ್ನು ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದರು. ಅವರ ಈ ಕಾರ್ಯಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಗುರುವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಧಿಕಾರಿಗಳು ಚಲಾದನ್ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದಾರೆ. ನನ್ನ ಜೀವನದಲ್ಲಿ ಇಂಥದ್ದೊಂದು ಸಂದರ್ಭ ಬರುತ್ತದೆ ಎಂದು ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ’ ಎಂದು ಚಲಾದನ್ ಜನಾರ್ದನನ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

63 ವರ್ಷದ ಚಲಾದನ್ ಅವರು ಯುವಕನಿದ್ದಾಗಿನಿಂದಲೇ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ಕಣ್ಣೂರಿನ ಜನಪ್ರಿಯ ಕಾರ್ಮಿಕರ ಸಹಕಾರಿ ದಿನೇಶ್ ಬೀಡಿ ಸಂಸ್ಥೆಯಲ್ಲೂ ಅವರು ಕೆಲಸ ಮಾಡಿದ್ದಾರೆ.

Exit mobile version