ಶಿವಸೇನಾ ಕಾರ್ಯಕರ್ತರಿಂದ ಕಿರಿಕ್

ಬೆಳಗಾವಿ, ಫೆ. 08 :  ಬೆಳಗಾವಿಯಲ್ಲಿ  ಮತ್ತೆ ಶಿವಸೇನೆ ಕಾರ್ಯಕರ್ತರಿಂದ ಪುಂಡಾಟ ಮೆರೆದಿದೆ. ಇಂದು ರಾಮಲಿಂಗ ಖಿಂಡ್ ಗಲ್ಲಿಯಲ್ಲಿ ಶಿವಸೇನೆಯಿಂದ “ಹುತಾತ್ಮ ದಿನಾಚರಣೆ “ಹಮ್ಮಿಕೊಳ್ಳಲಾಗಿತ್ತುಈ ಸಂದರ್ಭದಲ್ಲಿ ಶಿವಸೇನೆ ಕಾರ್ಯಕರ್ತರು ನಾಡದ್ರೋಹಿ ಘೋಷಣೆಗಲಾಟಿ ಎಬ್ಬಿಸಿದ್ದಾರೆ. . ಮರಾಠಿ ಹೋರಾಟದಲ್ಲಿ ಮಡಿದ ಹುತಾತ್ಮರಿಗೆ  ಅಮರ್ ರಹೇ ಎಂದು ಕೂಗಿದ್ದಲ್ಲದೇ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಅಂತ ಘೋಷಣೆ ಕೂಗಿ, ನಾಡಿಗೆ ದ್ರೋಹ ಮಾಡುವ ಕೆಲಸ ಮಾಡಿದ್ದಾರೆ.

ಶಿವಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ಪ್ರಕಾಶ್ ಶಿರೋಳ್ಕರ್ ನೇತೃತ್ವದಲ್ಲಿ ಹುತಾತ್ಮರ ದಿನಾಚರಣೆಯನ್ನು ಬೆಳಗಾವಿ ನಗರದ ರಾಮಲಿಂಗ ಖಿಂಡ್ ಗಲ್ಲಿಯಲ್ಲಿ ಆಯೋಜಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ಮಾತನಾಡಿದಂತ ಪ್ರಕಾಶ್ ಶಿರೋಳ್ಕರ್ ಮರಾಠಿ ಭಾಷಿಕರು ಮಹಾರಾಷ್ಟ್ರ ಸೇರಲು ಸಂಘಟಿತರಾಗುವಂತೆ ಕರೆ ನೀಡಿದ ಪ್ರಸಂಗವೂ ನಡೆಯಿತು.

Exit mobile version