ಕೊಡಗಿನ ಶನಿವಾರ ಸಂತೆಯಲ್ಲಿ ಅಕಾಲಿಕವಾಗಿ ಸುರಿದ ಧಾರಾಕಾರ ಮಳೆ

ಕೊಡಗು,ಫೆ.19: ಕೊಡಗಿನ ಶನಿವಾರ ಸಂತೆಯಲ್ಲಿ ಅಕಾಲಿಕವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು  ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಆಲಿಕಲ್ಲು ಸಹಿತ ಬಿದ್ದ ಈ ಮಳೆಗೆ ಗ್ರಾಮದ ಜನತೆ ಭಯಭೀತರಾಗಿದ್ದಾರೆ. ಆಲಿಕಲ್ಲು ತುಂಡುಗಳು ಬಿದ್ದು ಜಮ್ಮು ಕಾಶ್ಮೀರದಂತಾಗಿದೆ ಮೈಲಾತಪುರ ಅಂಕನಹಳ್ಳಿ ಗ್ರಾಮ.

ವಿಪರೀತ ಮಳೆ ಹಾಗೂ ಗಾಳಿಗೆ ತತ್ತರಿಸಿದ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಾಫಿ ಬೆಳೆ, ಮೆಣಸು, ಬಾಳೆ ತೋಟ, ಕಾಫಿ ತೋಟ  ಹಾಗೂ ಇನ್ನಿತರ ಹಲವಾರು ಬೆಳೆಗಳು ನಾಶವಾಗಿ ರೈತರು ನಷ್ಟಕ್ಕೀಡಾಗಿದ್ದಾರೆ. ಮಳೆಯ ರುದ್ರ ನರ್ತನದಿಂದಾಗಿ ಜನಸಾಮಾನ್ಯರು ಬೆಳೆಸಿದ ಬೆಳೆಗಳು ಮಣ್ಣು ಪಾಲಾಗಿವೆ.

Exit mobile version