ಶಾಸಕ ಸತೀಶ್ ರೆಡ್ಡಿ ಐಷಾರಾಮಿ ಕಾರುಗಳಿಗೆ ಬೆಂಕಿ: ದುಷ್ಕರ್ಮಿಗಳು ಪರಾರಿ

ಬೆಂಗಳೂರು, ಆ. 12: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ 2 ಕಾರುಗಳಿಗೆ ದುಷ್ಕರ್ಮಿಗಳು ನಿನ್ನೆ ತಡ ರಾತ್ರಿ ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ನಿನ್ನೆ ತಡರಾತ್ರಿ ಸುಮಾರು 1.30 ರ ಹೊತ್ತಿಗೆ ಸತೀಶ್ ರೆಡ್ಡಿಯವರ ಮನೆಯ ಹಿಂಬದಿಯ ಗೇಟ್ ನಿಂದ ಬಂದ 4 ಜನ ದುಷ್ಕರ್ಮಿಗಳು  ಫಾರ್ಚೂನರ್ ಸೇರಿದಂತೆ ಒಟ್ಟು 2 ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆಂದು ತಿಳಿದು ಬಂದಿದೆ.

ಇ ಬ್ಗಗ್ಗೆ ಪ್ರತಿಕ್ರಿಯಿಸಿದ ಸತೀಶ್ ರೆಡ್ಡಿ ಯಾರೊ ದುರಾಲೋಚನೆಯಿಂದ ಈ ರೀತಿ ಮಾಡಿದ್ದಾರೆ ಯಾರು ಎನೂ ಬೇಕಾದರೂ ಮಾಡಬಹುದು ಎಂದು ತೋರಿಸಲು ಇ ರೀತಿ ಮಾಡಿದ್ದಾರೆ. ರಾತ್ರಿ 1.23ರ ಸುಮಾರಿಗೆ ಹಿಂಬದಿಯ ಗೇಟ್ ನಿಂದ ಬಂದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹಿಂಬದಿ ಗೇಟ್ ನಿಂದ ಪರಾರಿಯಾಗಿದ್ದಾರೆ. ಪೊಲೀಸ್ ಮತ್ತು ವಾಚ್ಮನ್ ಮುಂದಿನ ಗೇಟ್ ನಲ್ಲಿದ್ದರು, ಇದು ರಾಜಕೀಯ ಹಿನ್ನಲೆಯಲ್ಲಿ ನಡೆದಿದೆ ಎಂದು ನನಗನ್ನಿಸುತ್ತಿಲ್ಲ  ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೇಟಿ ನೀಡಿದ ಡಿಸಿಪಿ ಶ್ರೀನಾಥ್ ಹಾಗೂ ಪೊಲೀಸ್ ಜಂಟಿ ಆಯುಕ್ತ ಮುರುಗನ್ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version