ಕೇರಳ ವಿಧಾನಸಭೆ ಸ್ಪೀಕರ್‌ ಆಗಿ ಸಿಪಿಐ(ಎಂ)ನ ಎಂ.ಬಿ.ರಾಜೇಶ್‌ ಆಯ್ಕೆ

ತಿರುವನಂತಪುರ, ಮೇ. 26: ಕೇರಳ ವಿಧಾನಸಭೆಯ ಸ್ಪೀಕರ್‌ ಆಗಿ ಆಡಳಿತಾರೂಢ ಸಿಪಿಐ(ಎಂ)ನ ಎಂ.ಬಿ.ರಾಜೇಶ್‌ ಆಯ್ಕೆಯಾಗಿದ್ದಾರೆ.

ಸಭಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಯುಡಿಎಫ್‌ನಿಂದ ಸ್ಪರ್ಧಿಸಿದ್ದ ಪಿ.ವಿ.ವಿಷ್ಣುನಾಥ ವಿರುದ್ಧ ರಾಜೇಶ್‌ ಜಯಗಳಿಸಿದ್ದಾರೆ. ವಿಷ್ಣುನಾಥ್‌ ಕೇವಲ 40 ಮತಗಳನ್ನು ಪಡೆದರೆ ರಾಜೇಶ್‌ 96 ಮತಗಳನ್ನು ಪಡೆದು ಗೆಲುವುದ ಸಾಧಿಸಿದರು.

ರಾಜೇಶ್‌ ಅವರು 10 ವರ್ಷ ಸಂಸತ್‌ ಸದಸ್ಯರಾಗಿದ್ದರು. ಸಿಪಿಐ (ಎಂ) ರಾಜ್ಯ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ನಂತರ ಮಾರ್ಕ್ಸಿಸ್ಟ್‌ ಪಕ್ಷದ ಯುವ ಘಟಕ ಡೆಮಾಕ್ರಟಿಕ್ ಯೂತ್ ಫೆಡರೇಷನ್‌ ಆಫ್‌ ಇಂಡಿಯಾದ (ಡಿವೈಎಫ್‌ಐ) ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Exit mobile version