ಜೆಡಿಎಸ್‌ ಮತ್ತು ಬಿಜೆಪಿಯ 500 ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರಸ್‌ಗೆ ಸೇರ್ಪಡೆ

ಮೈಸೂರು ಆ 19 : ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್‌ನ 500ಕ್ಕೂ ಹೆಚ್ಚು ಕಾರ್ಯಕರ್ತರು ಮಾಜಿ ಶಾಸಕ ಎಸ್ ಸೋಮಶೇಖರ್ ಅವರ ನೇತೃತ್ವದಲ್ಲಿ ಇಂದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷವನ್ನು ತೊರೆದು ಸ್ಥಳೀಯ ಮುಖಂಡರಾದ ಚೇತನ್ ಪುಟ್ಟ ಮಾದಪ್ಪ ಮತ್ತು ಇನ್ನಿತರ ಮುಖಂಡರ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಕಾಂಗ್ರೆಸ್‌ಗೆ ಬರಮಾಡಿಕೊಂಡ ಬಳಿಕ ಮಾತನಾಡಿದ ಮಾಜಿ ಶಾಸಕ ಸೋಮಶೇಖರ್  ಇಂದು ಇಲ್ಲಿ ಸೇರಿರುವ ಯುವಕರೆಲ್ಲರು ಕಾಂಗ್ರೆಸ್‌ ಸೇನಾನಿಗಳಾಗಿ ಬಂದಿದ್ದೀರಿ. ಅಂದು ಕಾಂಗ್ರೆಸ್‌ ಸ್ವಾತಾಂತ್ರ್ಯದ ಹೋರಾಟದಲ್ಲಿ ಯುವಪಡೆಯನ್ನು ಹೊಂದಿತ್ತು. ಆ ದಿಸೆಯಲ್ಲಿ ತಾವೆಲ್ಲರೂ ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು ಮುಕ್ತ ಮನಸ್ಸಿನಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದೀರಿ. ಎಲ್ಲರೂ ಜಾತಿ, ಧರ್ಮ ಮರೆತು, ದ್ವೇಷ, ಅಸೂಯೆ ಬಿಟ್ಟು ಕಾಂಗ್ರೆಸ್ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ನೂರಾರು ಶಿಕ್ಷಣ ಸಂಸ್ಥೆ, ಐಐಟಿ, ತಂತ್ರಜ್ಞಾನ ಸಂಸ್ಥೆಗಳಿಗೆ ಮೂಲ ಕಾರಣ. ಇವತ್ತು ದಿನ ಬಳಕೆ, ಗೃಹ ಬಳಕೆ ವಸ್ತು, ಪೆಟ್ರೋಲ್, ಡೀಸೆಲ್‌ ಬೆಲೆ ಗಗನ ಮುಟ್ಟುತ್ತಿವೆ. ಬಿಜೆಪಿ ಸರ್ಕಾರ ಕಣ್ಣುಮುಚ್ಚಿ ಕೂತಿವೆ. ಲಕ್ಷಾಂತರ ಮಂದಿ ವಿದ್ಯಾವಂತವರಿಗೆ ಉದ್ಯೋಗ ನೀಡದೆ ಬೀದಿಗೆ ತಳ್ಳಿವೆ. ಹಾಗಾಗಿ ಮುಂದಿನ ಬಾರಿ ಈ ಬಿಜೆಪಿಯನ್ನು  ಅಧಿಕಾರದಿಂದ ಕೆಳಗಿಸಬೇಕಾಗಿದೆ ಎಂದು ಅವರು ಹೇಳಿದರು.

Exit mobile version