ಸಹೋದರನ ಮಗ ನಾಪತ್ತೆ ಪ್ರಕರಣ ; ‘ಮಗನೇ ಮನೆಗೆ ಬೇಗ ಬಾ’ ಎಂದು ಕಣ್ಣೀರಾಕಿದ ರೇಣುಕಾಚಾರ್ಯ

Bengaluru : ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya Cried) ಸಹೋದರನ ಮಗ ನಾಪತ್ತೆಯಾಗಿರುವ ಪ್ರಕರಣ ಈಗ ಬೆಳಕಿಗೆ ಬಂದಿದ್ದು, ಈ ಸಂಗತಿ ನೆನೆದು ಎಂ.ಪಿ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ, “ಪ್ರತಿದಿನ ತನ್ನ ಸ್ನೇಹಿತರ ಜೊತೆಯಲ್ಲಿಯೇ ಇರುತ್ತಿದ್ದ, ಆದ್ರೆ ಚಂದ್ರಶೇಖರ್ ಭಾನುವಾರ ಮಾತ್ರ ಒಬ್ಬನೇ ಗೌರಿಗದ್ದೆಗೆ ಹೋಗಿದ್ದ.

ಈಗ ನಾಪತ್ತೆಯಾಗಿದ್ದಾರೆ, ನಾನು ಚುನಾವಣೆಯಲ್ಲಿ ಸೋತಾಗಲು ಇಷ್ಟು ನೋವಾಗಿರಲ್ಲಿಲ್ಲ. ಆದ್ರೆ ಇವತ್ತು ನನ್ನ ಅಣ್ಣನ ಮಗ ಕಾಣುತ್ತಿಲ್ಲ ಅನ್ನೋ ವಿಷಯ ಕೇಳಿ ಬಹಳ ದುಖಃ ಆಗುತ್ತಿದೆ ಎಂದು ಹೇಳಿದರು. ಎಂ.ಪಿ ರೇಣುಕಾಚಾರ್ಯರ ಸಹೋದರನ ಮಗ ನಾಪತ್ತೆಯಾಗಿದ್ದು,

https://vijayatimes.com/cm-bribe-to-journalists/

27 ವರ್ಷದ ಚಂದ್ರಶೇಖರ್ ವಿನಯ್ ಗುರೂಜಿ (Vinay Guruji) ಅವರನ್ನು ಭೇಟಿಯಾಗಲೆಂದು ಭಾನುವಾರ ಶಿವಮೊಗ್ಗ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟಾ ಗಾಡಿಯಲ್ಲಿ ತೆರಳಿದ್ದನ್ನು ಎನ್ನಲಾಗಿದೆ. ಅಲ್ಲಿಂದ ವಿನಯ್ ಗುರೂಜಿ ಭೇಟಿ ಮಾಡಿ ಅವರ ಆರ್ಶೀವಾದ ಪಡೆದು,

https://youtu.be/49tPYYDsOhY ಕಿಲ್ಲರ್‌ ಕೋಕ್‌ ! ಪ್ಲೀಸ್‌… ಮಕ್ಕಳನ್ನ ದೂರ ಇಡಿ

ನಂತರ ಅಲ್ಲಿಂದ ಚಂದ್ರು ಶಿವಮೊಗ್ಗದಲ್ಲಿ ತನ್ನ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಹೊತ್ತು (MP Renukacharya Cried) ಅವರೊಂದಿಗೆ ಕಾಲ ಕಳೆದು ಮತ್ತೆ ವಾಪಸ್ ಹೊನ್ನಳಿಗೆ ಬಂದಿದ್ದಾರೆ.

11:30ಕ್ಕೆ ಹೊನ್ನಾಳಿ ಸಂತೆ ಮೈದಾನದಲ್ಲಿ ಚಂದ್ರಶೇಖರ್ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ. ಆದ್ರೆ ಹೊನ್ನಾಳಿಯಿಂದ ಚಂದ್ರಶೇಖರ್ ಮನೆಗೆ ಬಂದಿಲ್ಲ.


ಹಾಗಾಗಿ ಚಂದ್ರಶೇಖರ್ ಹುಡುಕಾಟದ್ದಲ್ಲಿದ್ದ ಅವರ ಕುಟುಂಬದವರು ಹಾಗೂ ಪೋಲಿಸರು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಹೋದರನ ಮಗ ನಾಪತ್ತೆಯಾಗಿರುವುದನ್ನು ನೆನೆದು ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಸದಾ ನನ್ನ ಜೊತೆ ಇರುತ್ತಿದ್ದ ಚಂದ್ರಶೇಖರ್ ಈಗ ಇದ್ದಕ್ಕಿದಂತೆ ನಾಪತ್ತೆಯಾಗಿದ್ದಾನೆ.

ಎಲ್ಲರೊಂದಿಗೆ ಬೆರೆಯುತ್ತಿದ್ದ, ಯಾವತ್ತು ಯಾರಿಗೂ ಅವಾಚ್ಯ ಶಬ್ದಗಳಿಂದ ಎಂದು ಮಾತಾಡಲ್ಲಿಲ್ಲ. ಈಗ ಮೊಬೈಲ್ ಸಹ ಸ್ವಿಚ್ ಆಫ್ , ಹಾಗೆ ಆತ ತೆರಳಿದ್ದ ಕಾರು ಸಹ ಪತ್ತೆಯಾಗಿಲ್ಲ. ಮಗ ಚಂದ್ರು ಸುರಕ್ಷಿತವಾಗಿ ಮನೆಗೆ ಬರುತ್ತಾನೆ ಎಂಬ ನಂಬಿಕೆ ನನಗಿದೆ.

ಮಗ ಬಂದ ಕೂಡಲೇ ಮುದ್ದಾಡಬೇಕೆಂಬ ಆಸೆ ಆಗ್ತಿದೆ ಎಂದು ಶಾಸಕ ಮಾಧ್ಯಮಗಳ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Exit mobile version