ನಿಮಗೆ ಗೊತ್ತಿಲ್ಲದಂತೆ ಮಾಯವಾಗತ್ತೆ ನಿಮ್ಮ ಹಣ, ಹುಷಾರ್…!

ಮಂಗಳೂರು, ಡಿ. 28: ದಿನೇ ದಿನೇ ಒಂದಲ್ಲ ಒಂದು ಕಡೆ, ಆನ್ ಲೈನ್ ವಂಚನೆಯ ಪ್ರಕರಣಗಳು ಆಗುತ್ತಲೇ ಇರುತ್ತವೆ. ಇನ್ನೊಂದೆಡೆ ಗ್ರಾಹಕರಿಗೆ ಗೊತ್ತಿಲ್ಲದಂತೆ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಬ್ಯಾಂಕ್ ಗ್ರಾಹಕರಿಗೆ ಗೊತ್ತೇ ಆಗದಂತೆ ಖಾತೆಗಳಲ್ಲಿ ಹಣ ಕಡಿತಗೊಳ್ಳುತ್ತಿದೆ.

ಬ್ಯಾಂಕ್ ಖಾತೆಯಿಂದ ಹಣ ಕದಿಯುತ್ತಿರುವ ಪ್ರಕರಣಗಳು ಮಂಗಳೂರಿನಲ್ಲಿ ವರದಿಯಾಗಿವೆ. ಮಂಗಳೂರಿನ ಬೈಕಂಪಾಡಿಯ ನಿವಾಸಿ ದಯಾನಂದ ಎಂಬುವರು ಯೂನಿಯನ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ 20 ಸಾವಿರ ಹಣ ಅವರಿಗೆ ಗೊತ್ತಿಲ್ಲದಂತೆಯೇ ವಿತ್ ಡ್ರಾ ಮಾಡಲಾಗಿದೆ.

ಇನ್ನೊಂದೆಡೆ ಜಾನೆಟ್ ಡಿಸೋಜಾ ಎಂಬುವರು ಬಲ್ಮಠ ಶಾಖೆಯಲ್ಲಿ ಹೊಂದಿದ್ದಂತ ಕೆನರಾ ಬ್ಯಾಂಕ್ ಖಾತೆಯಿಂದ ಅವರಿಗೂ ಗೊತ್ತಿಲ್ಲದಂತೆ 40 ಸಾವಿರ ಹಣವನ್ನು ಎಗರಿಸಲಾಗಿದೆ. ಹೀಗೆ ದಯಾನಂದ ಹಾಗೂ ಜಾನೆಟ್ ಡಿಸೋಜಾ ಎಂಬುವರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡ ವಿಚಾರ ತಿಳಿದು ಬ್ಯಾಂಕ್ ನಲ್ಲಿ ವಿಚಾರಿಸಿದಾಗ. ಬ್ಯಾಂಕ್ ಸಿಬ್ಬಂಧಿಗಳು ಸರಿಯಾಗಿ ಮಾಹಿತಿಯನ್ನೇ ನೀಡಿಲ್ಲ. ಇದರಿಂದಾಗಿ ಇದೀಗ ಮಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ನೀವು ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳೂವುದ ಅಗತ್ಯವಾಗಿದೆ.

Exit mobile version