ನಿಥಾರಿ ಸೀರಿಯಲ್ ಕಿಲ್ಲರ್ಸ್: 21 ಮಕ್ಕಳ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಪಟ್ಟ ನಿಥಾರಿ ಹಂತಕರು ದೋಷಮುಕ್ತ

Allahabad: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ನಿಥಾರಿ ಹತ್ಯಾಕಾಂಡ ಪ್ರಕರಣಕ್ಕೆ ಸಂಭಂಧಪಟ್ಟಂತೆ (Nithari Serial Killers Case) ಉತ್ತರ ಪ್ರದೇಶದ ನೋಯ್ಡಾದ ನಿಥಾರಿ

ಎಂಬಲ್ಲಿ ಹಲವು ಮಕ್ಕಳು ನಾಪತ್ತೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ತಲೆ ನೋವಾಗಿತ್ತು. ಈ ನಡುವೆ ಬಾಲಕನೊಬ್ಬನ ಅಸ್ಥಿಪಂಜರ ಚರಂಡಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ

ತನಿಖೆ ನಡೆಸಿದ ಪೊಲೀಸರು, ಭಾರತ ದೇಶ ಹಿಂದೆಂದೂ ಕಂಡು ಕೇಳರಿಯದಂಥಾ ಸರಣಿ ಹತ್ಯಾಕಾಂಡ ಪ್ರಕರಣವನ್ನ ಬಯಲಿಗೆ ಎಳೆದಿದ್ದರು. ಇದೀಗ ಪ್ರಕರಣದ ಆರೋಪಿಗಳನ್ನು

ಒಂದೊಂದೇ ಕೇಸ್‌ನಲ್ಲಿ (Nithari Serial Killers Case) ಖುಲಾಸೆ ಮಾಡಲಾಗುತ್ತಿದೆ.

ಅಲಹಾಬಾದ್ ಹೈಕೋರ್ಟ್ (Allahabad Highcourt) ಹಲವು ಪ್ರಕರಣಗಳಲ್ಲಿ ಇಬ್ಬರೂ ಆರೋಪಿಗಳನ್ನೂ ದೋಷ ಮುಕ್ತರನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಇಬ್ಬರಿಗೂ ವಿಧಿಸಲಾಗಿದ್ದ

ಮರಣ ದಂಡನೆ ಶಿಕ್ಷೆ ಕೂಡಾ ರದ್ದಾಗಿದ್ದು, ಉತ್ತರ ಪ್ರದೇಶದ ನೋಯ್ಡಾದಲ್ಲಿ (Noida) ಇರುವ ಮಣಿಂದರ್ ಸಿಂಗ್ ಪರಿಹಾರ್‌ನ ಮನೆಯಲ್ಲಿ 2005 ರಿಂದ 2006ರ ನಡುವೆ ಈ ಸರಣಿ

ಹತ್ಯಾಕಾಂಡ ನಡೆದಿತ್ತು. ಮಣಿಂದರ್ ಸಿಂಗ್ ಪರಿಹಾರ್‌ನ ಮನೆಯಲ್ಲಿ ಸುರಿಂದರ್ ಕೋಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.

ಈ ಪ್ರಕರಣ ಬಯಲಾಗುತ್ತಿದ್ದಂತೆ ಉತ್ತರ ಪ್ರದೇಶ ಮಾತ್ರವಲ್ಲದೆ ಇಡೀ ದೇಶಾದ್ಯಂತ ಭಾರೀ ಸದ್ದುಮಾಡಿತ್ತು. ಮಣಿಂದರ್ ಸಿಂಗ್ ಪರಿಹಾರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲೇ

ಸುರಿಂದರ್ ಕೋಲಿ (Surinder Koli) ಹಲವು ಮಕ್ಕಳನ್ನು ಮನೆಗೆ ಕರೆ ತಂದು ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಹಲವು ಮಕ್ಕಳ ದೇಹದ

ಭಾಗಗಳು ಮನೆಯ ಸಮೀಪದಲ್ಲೇ ಇದ್ದ ಚರಂಡಿಯಲ್ಲಿ ಸಿಕ್ಕಿದ್ದವು. ಈ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಹಲವು ಮಕ್ಕಳು ಸುರಿಂದರ್ ಕೋಲಿಯಿಂದಲೇ ಹತ್ಯೆಗೀಡಾಗಿರಬಹುದು ಅನ್ನೋ ಶಂಕೆ ವ್ಯಕ್ತವಾಗಿತ್ತು.

ಇನ್ನು ಮಣಿಂದರ್ ಸಿಂಗ್ ಪರಿಹಾರ್ (Manindar Singh Parihar) ಹಾಗೂ ಸುರಿಂದರ್ ಕೋಲಿ ಇಬ್ಬರೂ ಸೇರಿ 20 ವರ್ಷ ವಯಸ್ಸಿನ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ

ಮಾಡಿರುವ ಆರೋಪ ಕೂಡಾ ಕೇಳಿ ಬಂದಿತ್ತು. ಈ ಪ್ರಕರಣದ ಪೊಲೀಸ್ ತನಿಖೆ ಬಳಿಕ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ, ಈ ಪ್ರಕರಣದಲ್ಲೂ ಇಬ್ಬರೂ ಆರೋಪಿಗಳನ್ನೂ ತಪ್ಪಿಸ್ಥರು ಎಂದು ಶಿಕ್ಷೆ ವಿಧಿಸಿತ್ತು.

ಒಟ್ಟು 16 ಪ್ರಕರಣಗಳು, ಮಣಿಂದರ್ ಸಿಂಗ್ ಪರಿಹಾರ್ ಹಾಗೂ ಸುರಿಂದರ್ ಕೋಲಿ ಇಬ್ಬರ ವಿರುದ್ಧವೂ ದಾಖಲಾಗಿದ್ದವು. ಈ ಪೈಕಿ 12 ಪ್ರಕರಣಗಳಲ್ಲಿ ಇದೀಗ ಇಬ್ಬರೂ ಆರೋಪಿಗಳೂ ದೋಷ

ಮುಕ್ತರಾಗಿದ್ದು, ಗಲ್ಲು ಶಿಕ್ಷೆಯಿಂದಲೂ ಪಾರಾಗಿದ್ದಾರೆ. ಇನ್ನೂ 4 ಪ್ರಕರಣಗಳು ಆರೋಪಿಗಳ ವಿರುದ್ಧ ವಿಚಾರಣೆ ಹಂತದಲ್ಲಿವೆ.

ಏನಿದು ಪ್ರಕರಣ:
ಈ ಹತ್ಯಾಕಾಂಡವು 2005 ರಿಂದ 2006ರವರೆಗೆ ನಡೆದಿದೆ ಎನ್ನಲಾದ ಪ್ರಕರಣವು 2006ರ ಡಿಸೆಂಬರ್‌ನಲ್ಲಿ (December) ಬೆಳಕಿಗೆ ಬಂದಿತ್ತು. ನೋಯ್ಡಾದ ನಿಥಾರಿಯ ಚರಂಡಿಯೊಂದರಲ್ಲಿ ಅಸ್ಥಿ

ಪಂಜರ ಪತ್ತೆಯಾಗುವ ಮೂಲಕ ಈ ಪ್ರಕರಣ ಬಯಲಾಗಿತ್ತು. ನಂತರ ಒಂದರ ಹಿಂದೊಂದರಂತೆ ಹಲವು ಮಕ್ಕಳು ಹಾಗೂ ಓರ್ವ ಮಹಿಳೆಯ ಮೃತ ದೇಹದ ತುಣುಕುಗಳು ಸಿಕ್ಕಿದ್ದವು.

ಇದನ್ನು ಓದಿ: ಸಲಿಂಗ ವಿವಾಹಕ್ಕೆ ಕಾನೂನಾತ್ಮಕ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಬಿಟ್ಟ ವಿಚಾರ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Exit mobile version